Adv

news21 ‌ ‌YELLAPURNews prakatane --------- ‌ kumar Oct9to15 ‌ ‌ ‌ ‌ IMG-20241009-195526

Wednesday, 12 October 2022

ಗ್ರಾಮ ಪಂಚಾಯತ ಅಧಿಕಾರ ಪುನಃ ಜನಪ್ರತಿನಿದಿಗಳಿಗೆ ನೀಡಲಾಗಿದೆ : ಪ್ರಮೋದ ಹೆಗಡೆ

 

IMG-20221012-144623 IMG-20221012-144617

ನಾಗೇಶ ಹೆಗಡೆ ಪಣತಗೇರಿ ತಾಲೂಕ ರೈತ ಸಂಘದ ಅಧ್ಯಕ್ಷ

 

IMG-20221012-134513 IMG-20221012-134505

ಆರ್ಥಿಕ ಲಾಭಕ್ಕಾಗಿ ಕೆರಳದಲ್ಲಿ ಮಾಟಮಂತ್ರ ಇಬ್ಬರು ಮಹಿಳೆಯರ ನರಬಲಿ

ಕೇರಳ : ಶಿಕ್ಷಿತರ ನಾಡು ಕೇರಳದಲ್ಲಿ ಮೂಢನಂಬಿಕೆ ಪ್ರಕರಣ ವರದಿಯಾಗಿದೆ. ಕೇರಳದ ದೇವಸ್ಥಾನದಲ್ಲಿ ಇಬ್ಬರು ಮಹಿಳೆಯರ ನರಬಲಿ ಮಾಡಲಾಗಿದೆ. ಎರ್ನಾಕುಲಂ ಜಿಲ್ಲೆಯ ಇಬ್ಬರು ಮಹಿಳೆಯರ ನರಬಲಿ ನಡೆಸಲಾಗಿದೆ ಎಂದು ವರದಿಯಾಗಿದೆ.
   ಕೆಲವು ದಿನಗಳ ಹಿಂದೆ ನಾಪತ್ತೆಯಾಗಿದ್ದ ಇಬ್ಬರು ಮಹಿಳೆಯರು ಕೇರಳದ ತಿರುವಲ್ಲಾದಲ್ಲಿ ಶಂಕಿತ ನರಬಲಿ ಪ್ರಕರಣದಲ್ಲಿ ಹತ್ಯೆಗೀಡಾಗಿದ್ದಾರೆ. ಪೊಲೀಸರ ಪ್ರಕಾರ, ಮಹಿಳೆಯರನ್ನು ಎರ್ನಾಕುಲಂನಿಂದ ಅಪಹರಿಸಿ ತಿರುವಲ್ಲಾದಲ್ಲಿ ಕೊಲೆ ಮಾಡಲಾಗಿದೆ.
     ಪದ್ಮ ಮತ್ತು ರೋಸ್ಲಿನ್ ಬಲಿಪಶುಗಳು ಎಂದು ಗುರುತಿಸಲಾಗಿದೆ. ಭಗವಲ್ ಸಿಂಗ್ ಮತ್ತು ಆತನ ಪತ್ನಿ ಲೀಲಾ ಮತ್ತು ಏಜೆಂಟ್ ಶಿಹಾಬ್ ಎಂಬುವವರನ್ನು ಕೊಲೆಯ ಮಾಡಿರುವ ಶಂಕಿತರಾಗಿದ್ದಾರೆ. ಎರ್ನಾಕುಲಂನಿಂದ ಇಬ್ಬರು ಮಹಿಳೆಯರನ್ನು ಅಪಹರಿಸಿರಬಹುದಾಗಿದೆ.   
ಪದ್ಮಾ ನಾಪತ್ತೆಯಾಗಿರುವ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾಗ ಹತ್ಯೆ ನಡೆದಿರುವುದು ಬೆಳಕಿಗೆ ಬಂದಿದೆ. ಮಹಿಳೆಯರ ಫೋನ್ ಗಳನ್ನು ಮುಹಮ್ಮದ್ ಶಫಿ ಎಂಬಾತನ ಬಳಿ ಪತ್ತೆ ಮಾಡಲಾಗಿದ್ದು, ಆತ ಒಡೆದು ಹಾಕಿದ್ದು, ಅಪಹರಣ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ.
  ಎರ್ನಾಕುಲಂ ಕಾಣೆಯಾದ ಮಹಿಳೆಗೆ ಸಂಬಂಧಿಸಿದಂತೆ ನಾವು ತನಿಖೆ ನಡೆಸಿದಾಗ, ಆಕೆಯನ್ನು ತಿರುವಲ್ಲಾದ ಆ ದಂಪತಿ ಮನೆಯಲ್ಲಿ ಕೊಂದು ಅವಳ ದೇಹವನ್ನು ತುಂಡುಗಳಾಗಿ ಕತ್ತರಿಸಿ ನಂತರ ಹೂಳಲಾಗಿದೆ. ಇದು ಆರ್ಥಿಕ ಲಾಭಕ್ಕಾಗಿ ದಂಪತಿ ನರಬಲಿ ನೀಡಿದ್ದಾರೆ ಎಂದು ಕೊಚ್ಚಿ ನಗರ ಪೊಲೀಸ್ ಆಯುಕ್ತ ನಾಗರಾಜು ಚಕಿಲಂ ಹೇಳಿದ್ದಾರೆ.
   ದಂಪತಿ ವಿಚಾರಣೆಗೆ ಒಳಪಡಿಸಿದಾಗ, ಜೂನ್‌ನಲ್ಲಿ ಅದೇ ಮನೆಯಲ್ಲಿ ಮತ್ತೊಬ್ಬ ಮಹಿಳೆಯನ್ನು ನರ ಬಲಿ ನೀಡಿರುವ ಬಗ್ಗೆ ಅವರು ಒಪ್ಪಿಕೊಂಡರು. ಆ ಮಹಿಳೆ ರೋಸೆಲಿನ್ ಎಂದು ಪೊಲೀಸರು ತಿಳಿಸಿದ್ದಾರೆ.
    ಈ ಪ್ರಕರಣದಲ್ಲಿ ಹಲವು ದಂಪತಿಗಳು ಆರ್ಥಿಕ ಲಾಭಕ್ಕಾಗಿ ನರಬಲಿ ಮಾಡಲಾಗಿದೆ. ಅಲ್ಲದೆ, ಮಧ್ಯವರ್ತಿ ಹಣ ಪಡೆದಿರುವುದು ನಮಗೆ ತಿಳಿದಿದೆ. ಇಡೀ ಪ್ರಕರಣವನ್ನು ಬಹಿರಂಗಪಡಿಸಲು ನಮಗೆ ಹೆಚ್ಚಿನ ಸಮಯ ಬೇಕು. ಕೊಲೆಯಲ್ಲಿ ಇನ್ನಷ್ಟು ಮಂದಿ ಭಾಗಿಯಾಗಿರುವ ಬಗ್ಗೆ ನಾವು ತನಿಖೆ ನಡೆಸುತ್ತಿದ್ದೇವೆ ಎಂದು ಪೊಲೀಸ್ ಮುಖ್ಯಸ್ಥರು ತಿಳಿಸಿದ್ದಾರೆ. ಮೇಲ್ನೋಟಕ್ಕೆ ಇದು ಮಾಟಮಂತ್ರ ಮತ್ತು ನರಬಲಿ ಪ್ರಕರಣವಾಗಿದೆ. ಪೊಲೀಸರು ಎಲ್ಲಾ ಅಂಶಗಳನ್ನು ಮತ್ತು ವಿವರಗಳನ್ನು ಪರಿಶೀಲಿಸುತ್ತಾರೆ ಎಂದು ಇನ್ಸ್‌ಪೆಕ್ಟರ್ ಜನರಲ್ ಪಿ ಪ್ರಕಾಶ್ ಹೇಳಿದ್ದಾರೆ.

ಅ. 15 ರಂದು ಉಚಿತ, ಆಯುರ್ವೇದ ಆರೋಗ್ಯ ತಪಾಸಣಾ ಶಿಬಿರ

ಯಲ್ಲಾಪುರ: ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ಘಟಕ, ಸಿದ್ದಾಪುರದ ಆಯುರ್ವೇದ ಮಹಾವಿದ್ಯಾಲಯ  ಹಾಗೂ ತಾಲೂಕಾ ಆಸ್ಪತ್ರೆಗಳ ಸಹಾಯೋಗದಲ್ಲಿ 
ಅಕ್ಟೋಬರ್ 15 ರಂದು ಬೆಳಿಗ್ಗೆ 9.30 ಕ್ಕೆ ಉಚಿತ, ಆಯುರ್ವೇದ ಆರೋಗ್ಯ ತಪಾಸಣಾ ಶಿಬಿರ ಏರ್ಪಡಿಸಲಾಗಿದೆ.
    ಕಾರ್ಮಿಕ ಸಚಿವ  ಶಿವರಾಮ ಹೆಬ್ಬಾರ, ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಪಂಚಾಯತ ರಾಜ್ಯ ವಿಕೇಂದ್ರೀಕರಣ ಸಮಿತಿ ಉಪಾಧ್ಯಕ್ಷ ಪ್ರಮೋದ ಹೆಗಡೆ,  ತಹಶೀಲ್ದಾರ ಶ್ರೀಕೃಷ್ಣ  ಕಾಮ್ಕರ, ತಾ.ಪಂ. ಸಿ.ಇ.ಓ ಜಗದೀಶ ಕಮ್ಮಾರ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು.
    ಸಿದ್ದಾಪುರ ಧನ್ವಂತರಿ, ಆರ್ಯುವೇದ ಕಾಲೇಜು ಪ್ರಾಚಾರ್ಯರಾದ  ಡಾ.ರೂಪಾ ಭಟ್ಟ, ರಾಜ್ಯ  ಕೆ.ಜೆ.ಯೂನಿಯನ್ ಕಾರ್ಯಕಾರಣಿ ಸಮಿತಿ  ಸದಸ್ಯ ನಾಗರಾಜ ಮದ್ಗುಣಿ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ. ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ಯಲ್ಲಾಪುರ ಅಧ್ಯಕ್ಷ ಶಂಕರ ಭಟ್ಟ, ತಾರೀಮಕ್ಕಿ ಅಧ್ಯಕ್ಷತೆ ವಹಿಸಲಿದ್ದಾರೆ.
     ಡಾ.ರೂಪಾ ಭಟ್ಟ, (ಪ್ರಾಚಾರ್ಯರು, ಧನ್ವಂತರಿ ಆಯುರ್ವೇದ ಕಾಲೇಜು, ಸಿದ್ದಾಪುರ) ಡಾ.ಮಧುಕೇಶ್ವರ ಹೆಗಡೆ, (ಉಪನ್ಯಾಸಕರು, ಧನ್ವಂತರಿ ಆಯುರ್ವೇದ ಕಾಲೇಜು, ಸಿದ್ದಾಪುರ), ಡಾ. ಚೈತ್ರಿಕಾ ಹೊಸುರು, (ಉಪನ್ಯಾಸಕರು, ಧನ್ವಂತರಿ ಆಯುರ್ವೇದ ಕಾಲೇಜು, ಸಿದ್ದಾಪುರ), ಡಾ. ಕೇಶವ್ ರಾಜ್ ವಿ.ವಿ., (ಆಯುಷ್‌ ವೈದ್ಯರು, ಯಲ್ಲಾಪುರ), ಡಾ. ನರೇಂದ್ರ ಪವಾರ (ತಾಲೂಕ ಆರೋಗ್ಯ ಅಧಿಕಾರಿ, ಆಸ್ಪತ್ರೆ ವೈದ್ಯಾಧಿಕಾರಿ ಯಲ್ಲಾಪುರ) ಶಿಬಿರದಲ್ಲಿ ಭಾಗವಹಿಸುವ ವೈದ್ಯರಾಗಿದ್ದಾರೆ ಎಂದು ಯಲ್ಲಾಪುರ ಕರ್ನಾಟಕ ಜರ್ನಲಿಸ್ಟ್ ಯೂನಿಯನ್, ಸಿದ್ದಾಪುರದ ಆಯುರ್ವೇದ ಮಹಾವಿದ್ಯಾಲಯ  ಹಾಗೂ ತಾಲೂಕಾ ಆಸ್ಪತ್ರೆ ಪ್ರಕಟಣೆಯಲ್ಲಿ ತಿಳಿಸಿದೆ.