Adv

Manoj-till-may-18-ntpyd Kesar-till-may-18-ntpyd IMG-20240514-234509 Kamakshi-hrushikesh-may18-ntpyd Bidremane-till-may12-0-5k-ntpyd Kesar-may1-to-7-not-paid DNGoankr-may-5to9-6k-ntpyd Hebbar-till-may16

Tuesday 15 February 2022

ಅಡಿಕೆ ಭವನದಲ್ಲಿ ನಡೆದ ಬಿಜೆಪಿ ವಿಸ್ತಾರಕರ ಕಾರ್ಯಾಗಾರ



 

ಉ.ಕ ಜಿಲ್ಲೆಯ ಅಪರ ಜಿಲ್ಲಾಧಿಕಾರಿ’ಯಾಗಿ ರಾಜು ಮೊಗವೀರ

IMG-20220214-071935 IMG-20220214-071935

ಮಂಗಳವಾರ ತಾಲೂಕಿನಲ್ಲಿ ಮೂವರಿಗೆ ಕೊರೊನಾ ಸೋಂಕು ದೃಢ, ಒಟ್ಟು 17 ಸಕ್ರಿಯ



 

ಮೇವು ಹಗರಣದಲ್ಲಿ ಆರ್ ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ದೋಷಿ ಎಂದು ತೀರ್ಪು



 

ಅರಣ್ಯ ಭೂಮಿ ಹೋರಾಟ- ಸ್ಮರಣ ಸಂಚಿಕೆ ; ದಾಖಲೆಗಳ ಸಂಗ್ರಹ

ವಜ್ರಳ್ಳಿಯಲ್ಲಿ ವಿದ್ಯಾರ್ಥಿಗಳಿಂದ ವನದರ್ಶನ.



ಉಳವಿ ಚನ್ನಬಸವೇಶ್ವರ ಜಾತ್ರೆಗೆ ತೆರಳುವ ಭಕ್ತರಿಗೆ ವೀರಶೈವ ಲಿಂಗಾಯತ ಸಮುದಾಯದಿಂದ ಊಟದ ವ್ಯವಸ್ಥೆ

 





 

ಸಂತ ಶ್ರೀ ಸೇವಾಲಾಲ ಜಯಂತೋತ್ಸವ

 ಸಂತ ಶ್ರೀ ಸೇವಾಲಾಲ ಜಯಂತೋತ್ಸವ 


ಯಲ್ಲಾಪುರ ; ಕರ್ನಾಟಕದ ಈಗಿನ ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ಬೆಳಗುತ್ತಿ ಹೋಬಳಿಯ ಸೂರಗೊಂಡನ ಕೋಪ್ಪ(ಭಾಯಗಡ್, ಸೂರ ಖಂಡ್) ಎಂಬಲ್ಲಿ ಸೇವಾಭಾಯ, ಸೇವಲಾಲ್ ಎಂಬ ನಾಮದೊಂದಿಗೆ ಬಂಜಾರರ ಅಜ್ಞಾನ ದೂರ ಮಾಡಲು 15 ಫೆಬ್ರವರಿ1739 ರಲ್ಲಿ ಭೀಮ ನಾಯ್ಕ ಹಾಗೂ ಧರ್ಮಿಣಿ ಮಾತೆಯವರಿಗೆ ದೈವಿ ಪುರುಷನ ಜನನವಾಯಿತು.

    ಹರಪ್ಪ ನಾಗರಿಕತೆಯಿಂದ ಬೆಳೆದು ಬಂದ ಬಂಜಾರರು. ಸಾವಿರಾರು ವರ್ಷಗಳಿಂದ ಗ್ರಾಮ, ನಗರ ಜೀವನದಿಂದ ದೂರವಿದ್ದು, ಅಜ್ಞಾನ, ಅಂಧಕಾರಗಳಿಂದ ಅರಣ್ಯವಾಸಿಗಳಾಗಿ ಜೀವನ ನಡೆಸುತ್ತಿದ್ದರು. ಇವರಿಗೆ ಶ್ರೀ ಸೇವಾಲಾಲ್ ಮಹಾರಾಜರ ಜನನ ಅಜ್ಞಾನದಿಂದ ಹಾಗೂ ಅರಣ್ಯವಾಸದಿಂದ ಮುಕ್ತಿಯ ಮೇಟ್ಟಿಲಾಯಿತು.

   ಬಂಜಾರರು ಈ ದೈವ ಪುರುಷನನ್ನು “ಮೋತಿವಾಳೋ” “ಲಾಲ್ ಮೋತಿ” ಎಂದು ಕರೆಯುತ್ತಾರೆ. ಕಾರಣ ಮುಂಬಯಿಯ “ಸ್ಮಿತ್ ಭಾವುಚಾ” ಎಂಬ ಸ್ಥಳದಲ್ಲಿ ಹಿಂದೆ ಪೋರ್ಚುಗೀಸರ ಹಡಗು ಸಿಕ್ಕಿ ಹಾಕಿಕೊಂಡಿತ್ತು. ಇದನ್ನು ಸೇವಾಲಾಲ್ ತಮ್ಮ ಜಾಣತನದಿಂದ ದಡ ಸೇರಿಸಿದ ವೀರರಾಗಿದ್ದರು. ಅದರ ಪ್ರತಿಯಾಗಿ ಪೋರ್ಚುಗೀಸರು ಇವರಿಗೆ ಮುತ್ತಿನ ಹಾರವನ್ನು ಕಾಣಿಕೆಯಾಗಿ ನೀಡಿದ್ದರು. ಅದಕ್ಕಾಗಿ ಅವರನ್ನು ಮೋತಿವಾಳೋ ಎಂದು ಅಭಿಮಾನದಿಂದ ಕರೆಯಲಾಗುತ್ತಿತ್ತು. 

    ಬುದ್ಧ, ಬಸವ, ಕಬೀರ, ಗುರು ನಾನಕ್ , ಮುಂತಾದ ಧಾರ್ಮಿಕ ಮಾನವತವಾದಿಗಳ ಮಧ್ಯೆ ಒಬ್ಬ ಸಾಮಾನ್ಯ ದನಗಳನ್ನು ಮೇಯಿಸುತ್ತ ದನಗಾಹಿ ಗೋಪಾಲಕನಾಗಿದ್ದ ಸೇವಾಲಾಲ್ ತಮ್ಮ ಜೀವನಾನುಭವದ ಮೂಲಕ ಗೌರವಯುತ ಮಾತುಗಳಲ್ಲಿ ಸತ್ಯ, ಅಹಿಂಸಾ ಮಾರ್ಗಗಳನ್ನು ಪ್ರಕಾಶಗೋಳಿಸುವ ನಿಟ್ಟಿನಲ್ಲಿ ತಮ್ಮ ಬೋಧನೆಯನ್ನು ನಡೆಸಿದರು. ಒಂದು ಸಹೋದರತ್ವದ, ಭ್ರಾತೃತ್ವದ ಸಮಾಜವನ್ನು ನಿರ್ಮಿಸಲು ಶ್ರಮಿಸಿದರು.

   ಇಂತ ಮಾನವತಾವಾದಿಯ ಜನನದ ಮತ್ತು ಜೀವನ ಮೌಲ್ಯಗಳು ಇಂದು ಲಂಬಾಣಿ ತಾಂಡಗಳಲ್ಲಿ ಜನ ಜನಿತವಾಗಿವೆ. ಹಲವಾರು ಅಜ್ಞಾನಗಳು, ಮೌಢ್ಯತೆಯ ಪರಾಕಾಷ್ಟೆ ತಲುಪಿ ಅಂಧಕಾರಲ್ಲಿ ಮುಳಗಿರುವ ಸಂದರ್ಭದಲ್ಲಿ ಸಾಮಾನ್ಯ ಸರಳ ವ್ಯಕ್ತಿ ಸದ್ಗುರು ಸೇವಾಲಾಲ್ ರ ಅನುಭವದ ಜ್ಞಾನದ ನುಡಿಗಳು ಇಂದಿಗೂ ಮಾರ್ಗದರ್ಶನವಾಗಿವೆ.


ತಹಶೀಲ್ದಾರ ಕಚೇರಿಯಲ್ಲಿ ಶ್ರೀ ಸಂತ ಸೇವಾಲಾಲ ಜಯಂತೋತ್ಸವ


ಯಲ್ಲಾಪುರ : ಬಸವಣ್ಣ, ಶಿಶುನಾಳ ಶರೀಫ, ಕನಕದಾಸರಂತೆ ಸಂತ ಸೇವಾಲಾಲ್ ಮಾನವ ಜನಾಂಗಕ್ಕೆ ಅತ್ಯುತ್ತಮವಾದ ತತ್ವಸಿದ್ಧಾಂತಗಳನ್ನು ನೀಡಿದ್ದಾರೆ. ಅದನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ಉತ್ತಮ ಜೀವನ ಆದರ್ಶಯುತ ಬದುಕು ಸಾಗಿಸಲು ಸಾಧ್ಯ ಎಂದು ತಹಶೀಲ್ದಾರ ಶ್ರೀಕೃಷ್ಣ ಕಾಮ್ಕರ ಹೇಳಿದರು.

   ಅವರು ತಮ್ಮ ಕಾರ್ಯಾಲಯದಲ್ಲಿ ಮಂಗಳವಾರ ಆದರ್ಶವಾದಿ ಸಂತ ಸೇವಾಲಾಲ್ ಅವರ 283 ನೇ ಜಯಂತೋತ್ಸವದ ಅಂಗವಾಗಿ ಸೇವಾಲಾಲ್ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈದು ಪೂಜೆ ಸಲ್ಲಿಸಿ ಮಾತನಾಡಿದರು.

    ಸಂತ ಸೇವಾಲಾಲ್ ಕುರಿತು ಉಪನ್ಯಾಸ ನೀಡಿದ ಶಿಕ್ಷಕ ಗಂಗಾಧರ ಲಮಾಣಿ, ಸಂತ ಸೇವಾಲಾಲರು ಸತ್ಯವನ್ನು ನುಡಿಯಬೇಕು, ದುಶ್ಚಟಗಳಿಂದ ದೂರ ಇರಬೇಕು, ಗೋರಕ್ಷಣೆ ನಮ್ಮ ಆಧ್ಯತೆಯಾಗಿರಬೇಕು. ಹಸಿದ ಬಡವರಿಗೆ ಅನ್ನ ನೀಡಬೇಕು ಎನ್ನುವ ಸಂತ ಸೇವಾಲಾಲರ ನುಡಿಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ನಾವು ಸೇವಾಲಾಲ ಅವರಿಗೆ ನೀಡುವ ನಿಜವಾದ ಗೌರವವಾಗಿದೆ ಎಂದರು.


    ಗ್ರೇಡ್ 2 ತಹಶೀಲ್ದಾರ ಸಿ ಜಿ ನಾಯ್ಕ, ತಾಲೂಕಾ ಆರೋಗ್ಯಾಧಿಕಾರಿ ಡಾ. ನರೇಂದ್ರ ಪವಾರ್, ವಿವಿಧ ಇಲಾಖೆಯ ಅಧಿಕಾರಿಗಳು, ಯಲ್ಲಾಪುರದ ಬಂಜಾರ ಸೇವಾ ಪ್ರತಿಷ್ಠಾನದ ಅಧ್ಯಕ್ಷ ಶಂಕರ ನಾಯಕ, ಬಂಜಾರ ಸಮಾಜದ ಊರ ನಾಯಕ ಶಿಕ್ಷಕ ಈಶ್ವರ ರಾಥೋಡ್, ಬಂಜಾರಾ ಸಮಾಜದ ಪ್ರಮುಖರಾದ ರಮೇಶ ನಾಯಕ, ದೇವರು ಲಮಾಣಿ ಸೇರಿದಂತೆ ತಾಲೂಕಾ ಕಚೇರಿ ಸಿಬ್ಬಂದಿಗಳು ಇದ್ದರು.


ಕಾರ್ಮಿಕ ಸಚಿವ ಶಿವರಾಮ‌ ಹೆಬ್ಬಾರರಿಂದ ಸಂತ ಸೇವಾಲಾಲ್ ಜಯಂತೋತ್ಸವದ ಶುಭಾಶಯ


ಯಲ್ಲಾಪುರ : ಆಧ್ಯಾತ್ಮದ ಮೂಲಕವಾಗಿ ಉಪದೇಶಗಳನ್ನು ನೀಡಿ, ಸನ್ಮಾರ್ಗದತ್ತ ಕೊಂಡೊಯ್ದವರು. ತಮ್ಮ ಬಂಜಾರ ಸಮುದಾಯದಲ್ಲಿ ಧೈರ್ಯ, ಸಾಹಸ, ಆತ್ಮಸ್ಥೈರ್ಯ ಮತ್ತು ಆತ್ಮಾಭಿಮಾನವನ್ನು ಮೂಡಿಸಿ ಸಮಾಜ ಪರಿವರ್ತನಾ ಯೋಗಿಯಾಗಿದ್ದ ಸಂತ ಸೇವಾಲಾಲರು, ಬಂಜಾರ ಸಮುದಾಯದ ಶ್ರೇಯೋಭಿವೃದ್ಧಿಗೆ‌‌ ಅಪಾರ‌ವಾಗಿ ಶ್ರಮಿಸಿದ್ದಾರೆ ಎಂದು ಕಾರ್ಮಿಕ ಖಾತೆ ಸಚಿವರು ಹಾಗೂ  ಹಾವೇರಿ ಜಿಲ್ಲಾ ಉಸ್ತುವಾರಿ ಸಚಿವ  ಶಿವರಾಮ ಹೆಬ್ಬಾರ್ ಹೇಳಿದ್ದಾರೆ.

   ಯಲ್ಲಾಪುರ ವಿಧಾನಸಭಾ ಕ್ಷೇತ್ರ ಹಾಗೂ ನಾಡಿನ ಸಮಸ್ತ ಬಂಜಾರಾ ಸಮಾಜದವರಿಗೆ  ಸಂತ ಸೇವಾಲಾಲ್ ಮಹಾರಾಜರ 283 ನೇ ಜಯಂತೋತ್ಸವದ ಹಾರ್ದಿಕ ಶುಭಾಶಯಗಳನ್ನು ಅವರು ತಿಳಿಸಿದ್ದಾರೆ.

ಮಹಿಳಾ ಚಾಲಕಿ ಮಣಿ ವಡ್ಡರಗೆ ಬ್ಲಾಕ್ ಕಾಂಗ್ರೆಸ್ ನಿಂದ ಸನ್ಮಾನ

 


ಮಹಿಳಾ ಚಾಲಕಿ ಮಣಿ ವಡ್ಡರಗೆ ಬ್ಲಾಕ್ ಕಾಂಗ್ರೆಸ್ ನಿಂದ ಸನ್ಮಾನ 

ಯಲ್ಲಾಪುರ : ಹಳಿಯಾಳದ ದೇಶಪಾಂಡೆ ರೂಡಸೆಟ್ ನಲ್ಲಿ ಮಹಿಳೆಯಾಗಿ ನಾಲ್ಕು ಚಕ್ರ ವಾಹನದ ಚಾಲನೆಯ ಯಶಸ್ವಿ ತರಬೇತಿ ಪಡೆದ ಮಣಿ ನಿಂಗಪ್ಪ ವಡ್ಡರ್ ಇವರಿಗೆ ಅಭಿನಂದನಾ ಸಭೆ ತಾಲೂಕಾ ಬ್ಲಾಕ್ ಕಾಂಗ್ರೆಸ್ ನಿಂದ ಸೋಮವಾರ ಪಕ್ಷದ‌ ಕಾರ್ಯಾಲಯದಲ್ಲಿ ಹಮ್ಮಿಕೊಳ್ಳಲಾಗಿತ್ತು.

   ಕೆಪಿಸಿಸಿ ಸದಸ್ಯ ಹಾಗೂ ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಉಸ್ತುವಾರಿ ಗಳಾದ ಪ್ರಶಾಂತ ದೇಶಪಾಂಡೆಯವರು ಮಣಿ ನಿಂಗಪ್ಪ ವಡ್ಡರ್ ಇವರಿಗೆ ಸನ್ಮಾನಿಸಿ ಗೌರವಿಸಿದರು. ಉಮ್ಮಚಗಿ ಗ್ರಾಮ ಪಂಚಾಯತ್ ಕಚೇರಿಯ ವಾಹನಕ್ಕೆ ಮಣಿ ವಡ್ಡರ್ ಚಾಲಕಿಯಾಗಿ ಆಯ್ಕೆಯಾಗಿದ್ದಾರೆ.

   ಸನ್ಮಾನಿಸಿ ಮಾತನಾಡಿದ ಪ್ರಶಾಂತ ದೇಶಪಾಂಡೆ, ಕಾಂಗ್ರೆಸ್ ಪಕ್ಷ ಮಹಿಳೆಯರು ಗೌರವಯುತವಾಗಿ ಎಲ್ಲ ರಂಗದಲ್ಲಿಯೂ ಮುಂದೆ ಬರುವುದನ್ನು ಪ್ರೋತ್ಸಾಹಿಸುತ್ತದೆ. ಓರ್ವ ಮಹಿಳೆಯಾಗಿ ನಾಲ್ಕು ಚಕ್ರದ ವಾಹನ ಚಲಾಯಿಸುವ ತರಬೇತಿಯನ್ನು ಯಶಸ್ವಿಯಾಗಿ ಪೂರೈಸಿರುವ ಮಣಿ ವಡ್ಡರ್ ಬಹಳಷ್ಟು ಮಹಿಳೆಯರಿಗೆ ಮಾದರಿಯಾಗಿದ್ದಾರೆ. ಪುರುಷರಂತೆ ಮಹಿಳೆಯರೂ ಕೂಡ ಇನ್ನು ಕಾಲಿಡದ ಹಲವಾರು ಕ್ಷೇತ್ರದಲ್ಲಿ ತಮ್ಮ ಪ್ರತಿಭೆಯನ್ನು ತೋರಿಸಬೇಕು ಎಂದು ಅವರು ಕರೆ ನೀಡಿದರು.

    ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ವಿ ಎಸ್ ಭಟ್ಟ, ಪಕ್ಷದ ಪ್ರಮುಖರಾದ ದಿಲೀಪ್ ರೋಕಡೆ, ನರಸಿಂಹ ನಾಯ್ಕ, ಅಶೋಕ ಶೆಟ್, ಎನ್ ಎನ್ ಹೆಬ್ಬಾರ್, ವಿ ಜಿ ಭಾಗ್ವತ್  , ಪ್ರಧಾನ ಕಾರ್ಯದರ್ಶಿ ಅನಿಲ್ ಮರಾಟೆ, ಬಕೀಲರಾದ ಬಿ.ಬಿ ಅಮೀನಾ, ಬಸವರಾಜ ಕಳಸೂರುಕರ ಹಾಗೂ ಪಕ್ಷದ ಪ್ರಮುಖ ಕಾರ್ಯಕರ್ತರು ಉಪಸ್ಥಿತರಿದ್ದರು.

ನಾಳೆ ಫೆ.16 ರಿಂದ ಪಿಯುಸಿ, ಪದವಿ ಹಾಗೂ ಸ್ನಾತಕೋತ್ತರ ತರಗತಿ ಪುನರಾರಂಭ

IMG-20220214-071935 IMG-20220214-071935 IMG-20220214-071935

ಯಲ್ಲಾಪುರ ಪಟ್ಟಣದಲ್ಲಿ ಆನಲೈನ್ ಕ್ಯಾಸಿನೊ ರಮ್ಮಿಗೆ ಪ್ರತಿದಿನ 10 ಲಕ್ಷಕ್ಕೂ ಹೆಚ್ಚು ಹಣ  

IMG-20220214-071935 IMG-20220214-071935 IMG-20220214-071935 IMG-20220214-071935 IMG-20220214-071935

ಸಾರ್ವಜನಿಕ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ಗ್ರಾಮ ಆರೋಗ್ಯ ಮತ್ತು ಪೌಷ್ಟಿಕ ಸಮಿತಿಗಳ ಪಾತ್ರ ಬಹಳ ಮಹತ್ವದ್ದು

IMG-20220214-071935 IMG-20220214-071935 IMG-20220214-071935