ಯಲ್ಲಾಪುರ : ಇಲ್ಲಿಯ ವ್ಯಕ್ತಿಯೋರ್ವರು ತನ್ನ ತಾಯಿಯಿಂದ ಹಣ ಪಡೆದು ತಮ್ಮದ ಹೆಸರಲಲ್ಲದ ಭೂಮಿ ತೋರಿಸಿ ಮೋಸ ಮಾಡಿದ್ದಾರೆ ಎಂದು ಶಿಕ್ಷಕಿ ರೇವತಿ ನಾಯಕ ಅವರ ಪುತ್ರ ಶ್ರೀಶಾ ನಾಗ ಪೂಜಾರಿ ಪತ್ರಿಕಾ ಹೇಳಿಕೆಯಲ್ಲಿ ಹೇಳಿದ್ದಾರೆ. ಈ ಬಗ್ಗೆ, ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ ಎಂದು ದಾಖಲೆ ಸಹಿತ ಮಾಹಿತಿ ನೀಡಿದ್ದಾರೆ.
ಮಂಚಿಕೇರಿಯ ವ್ಯಕ್ತಿಯೊಬ್ಬರ ಮೂಲಕ ಪರಿಚಯವಾದ ಯಲ್ಲಾಪುರದ ಗೌರವಾನಿತ ವ್ಯಕ್ತಿಯ ಸಂಬಂಧಿಕ ಭೂ ವ್ಯವಹಾರದಲ್ಲಿ ತೊಡಗಿದ್ದು, ಭೂಮಿ ಕೊಡಸಲು ನನ್ನ ತಾಯಿಗೆ ವಾಗ್ದಾನ ಮಾಡಿದ್ದರು.
ಭೂಮಿಯನ್ನು ತೋರಿಸಿ, 18.5 ಲಕ್ಷ ರೂ.ಗೆ 2.5 ಗುಂಟೆ ಭೂಮಿಯನ್ನು ಖರೀದಿಸಲು ಒಪ್ಪಂದ ಆಗಿತ್ತು. ಮುಂಗಡವಾಗಿ 5 ಲಕ್ಷ ರೂಪಾಯಿ ನೀಡುವಂತೆ ತಿಳಿಸಿದ , ಪಹಣಿ ಪತ್ರಿಕೆಯನ್ನು ತೋರಿಸಿದರು. ಆ ಪಹಣಿ ಪತ್ರಿಕೆಯಲ್ಲಿ ಇನ್ನೊಬ್ಬರ ಹೆಸರಿದ್ದರೂ, ತನ್ನ ಹೆಸರಿನಲ್ಲಿ ದಸ್ತಾವೇಜು ಮಾಡಿಕೊಡುತ್ತೇವೆಂದು ಭರವಸೆ ನೀಡಿದರು.
ನನ್ನ ತಾಯಿ ಒಪ್ಪಂದಕ್ಕೆ ಸಹಿ ಮಾಡಿದರು. ಮೊದಲನೆಯ ಕಂತಿನ 1 ಲಕ್ಷ ರೂ. ನೀಡಿದ ನಂತರ, 4 ಲಕ್ಷ ರೂ. ಅಂಕೋಲಾ ಅರ್ಬನ್ ಬ್ಯಾಂಕಿನಲ್ಲಿ ಜಮಾ ಮಾಡಲಾಯಿತು. ಆದರೆ, ಭೂಮಿ ಪೋಡಿ ಆಗದ ಕಾರಣ, ವ್ಯಕ್ತಿ 3.7 ಲಕ್ಷ ರೂಪಾಯಿ ಮೌಲ್ಯದ ಚೆಕ್ ನೀಡಿದರೂ, ಅದು ಬೌನ್ಸ್ ಆಗಿದ್ದು ರಮಗೆ ಮೋಸ ಆಗಿದೆ ಎಂದು ತಿಳಿಸಿದ್ದಾರೆ.