Adv

news21 ‌ ‌YELLAPURNews prakatane --------- ‌ kumar Oct9to15 ‌ ‌ ‌ ‌ IMG-20241009-195526

Wednesday, 7 August 2024

ಬೇಡ್ತಿಯ ಹಳೆ ಸೇತುವೆಯ ಸುರಕ್ಷತೆಗೆ ಕ್ರಮ ಕೈಗೊಳ್ಳುವ ಅಗತ್ಯ: ಕಿಸಾನ್ ಸಂಘ

ಯಲ್ಲಾಪುರ: ತಾಲೂಕಿನ ಯಲ್ಲಾಪುರ-ಶಿರಸಿ ರಸ್ತೆಯ ಬೇಡ್ತಿಯ ಹಳೆ ಸೇತುವೆ ಸುರಕ್ಷತೆ ಕ್ರಮಗಳನ್ನು ತಕ್ಷಣ ಅನುಸರಿಸಲು ತಾಲೂಕು ಆಡಳಿತಕ್ಕೆ ಸೂಚಿಸುವಂತೆ ಭಾರತೀಯ ಕಿಸಾನ್ ಸಂಘದ ಜಿಲ್ಲಾ ಉಪಾಧ್ಯಕ್ಷ ನರಸಿಂಹ ಸಾತೊಡ್ಡಿ ಆಗ್ರಹಿಸಿದ್ದಾರೆ. 
   ಬುಧವಾರ ತಹಶೀಲ್ದಾರ ಅಶೋಕ ಭಟ್ಟ ಅವರಿಗೆ ಮನವಿ ಸಲ್ಲಿಸಿ, ಅವರು ಸೇತುವೆಯ ದುರಸ್ಥಿ ನಡೆದಿದೆಯಾದರೂ, ಕೆಲವು ಕಡೆ ರೇಲ್ ಇಲ್ಲವಾದ್ದರಿಂದ ಅಪಘಾತ ಸಂಭವಿಸುವ ಸಾಧ್ಯತೆಯಿದೆ ಎಂದು ತಿಳಿಸಿದ್ದಾರೆ. ಈ ಹಳೆ ಸೇತುವೆಯ ಮೇಲೆ ವಾಹನ ಸಂಚಾರವನ್ನು ನಿಲ್ಲಿಸುವ ಅಗತ್ಯವಿದ್ದು, ಮೀನುಗಾರರು ಮತ್ತು ಪ್ರವಾಸಿಗರ ಸುರಕ್ಷತೆಗೆ ಕ್ರಮ ಕೈಗೊಳ್ಳಬೇಕು. 
    ಹಳೆಯ ಸೇತುವೆಯನ್ನು ಪಾದಾಚಾರಿಗಳಿಗೆ ಮಾತ್ರ ಮೀಸಲಿಟ್ಟು, ಇನ್ನಿತರ ವಾಹನ ಸಂಚಾರವನ್ನು ನಿಷೇಧಿಸಲು ನಾಮಫಲಕ ಹಾಕಿ, ಅವಘಡಗಳನ್ನು ತಡೆಯುವಂತೆ ಮನವಿ ಮಾಡಿದ್ದಾರೆ.