Adv

news21 ‌ ‌YELLAPURNews prakatane --------- ‌ kumar Oct9to15 ‌ ‌ ‌ ‌ IMG-20241009-195526

Tuesday, 6 August 2024

ಯಲ್ಲಾಪುರ : ಜಾನುವಾರು ಸಾಗಣೆ: ನಾಲ್ವರು ಬಂಧನ, ವಾಹನ ಜಪ್ತಿ

ಯಲ್ಲಾಪುರ: ಪಟ್ಟಣದ ಜೈ ಕಾರ್ನಾಟಕ ವೆಲ್ಡಿಂಗ್ ಗ್ಯಾರೇಜ್ ಎದುರು, ಕಾರವಾರ-ಬಳ್ಳಾರಿ ರಾಷ್ಟ್ರೀಯ ಹೆದ್ದಾರಿ ನಂ. 63 ರಲ್ಲಿ, ಮಂಗಳವಾರ ಬೆಳಗ್ಗೆ ಪೊಲೀಸರು ನಾಲ್ವರು ಆರೋಪಿಗಳನ್ನು ಜಾನುವಾರುಗಳ ಅಕ್ರಮ ಸಾಗಣೆಯ ಆರೋಪದಲ್ಲಿ ಬಂಧಿಸಿದ್ದಾರೆ. ಜೊತೆಗೆ, ಅಕ್ರಮವಾಗಿ ಸಾಗಿಸುತ್ತಿದ್ದ ಜಾನುವಾರುಗಳು ಮತ್ತು ವಾಹನವನ್ನು ವಶಪಡಿಸಿಕೊಳ್ಳಲಾಗಿದೆ.
  ಪೊಲೀಸರ ಪ್ರಕಾರ, ಭಟ್ಕಳದ ತಿರುಮಲ ನಾಯಕನ ಸೂಚನೆಯ ಮೇರೆಗೆ, ಬೆಳಗಾವಿಯಿಂದ ಭಟ್ಕಳಕ್ಕೆ ಅಕ್ರಮವಾಗಿ ಜಾನುವಾರುಗಳನ್ನು ಸಾಗಿಸಲಾಗುತ್ತಿತ್ತು. ಅಂದಾಜು 80,000 ರೂ. ಮೌಲ್ಯದ 5 ಕೋಣದ ಕರುಗಳು ಮತ್ತು ಒಂದು ಆಕಳನ್ನು ಹಾಗೂ 2 ಲಕ್ಷ ರೂ. ಮೌಲ್ಯದ ಮಹೇಂದ್ರ ಪಿಕ್‌ಅಪ್ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ.
   ಭಟ್ಕಳದ ತಿರುಮಲ ನಾಯಕ, ಬೆಳಗಾವಿಯ ರಮೇಶ ರಾಮಪ್ಪ ನೇಗನಾಳ (30), ಕ್ಲೀನರ್ ಗಂಗಪ್ಪ ನಿಂಗಪ್ಪ ಟೊನ್ನಿ (43), ಮತ್ತು ಶಿವರಾಯಪ್ಪ ಶಿವುಗುಂಡಪ್ಪ ಪಾಟೀಲ (32), ಬಂಧಿತ ಆರೋಪಿಗಳಾಗಿದ್ದಾರೆ.
   ಯಾವುದೇ ಪಾಸ್ ಅಥವಾ ಪರವಾನಿಗೆ ಇಲ್ಲದೆ, ಹಿಂಸಾತ್ಮಕವಾಗಿ ಜಾನುವಾರುಗಳನ್ನು ಸಾಗಿಸುತ್ತಿದ್ದ ಹಿನ್ನೆಲೆಯಲ್ಲಿ ಪಿಎಸ್‌ಐ ಸಿದ್ದಪ್ಪ ಗುಡಿ ನೇತೃತ್ವದಲ್ಲಿ ಸಿಬ್ಬಂದಿಯವರು ದಾಳಿ ನಡೆಸಿ ಆರೋಪಿಗಳ ಮೇಲೆ ಪ್ರಕರಣ ದಾಖಲಿಸಿದ್ದಾರೆ.