ಯಲ್ಲಾಪುರ: ವಿಶ್ವ ಹಿಂದೂ ಪರಿಷತ್ ನೂತನ ಪದಾಧಿಕಾರಿಗಳ ಆಯ್ಕೆ ಗುರುವಾರ ನಡೆದ ಸಭೆಯಲ್ಲಿ ಘೋಷಿಸಲಾಯಿತು. ಯಲ್ಲಾಪುರ ತಾಲೂಕು ಅಧ್ಯಕ್ಷರಾಗಿ ಗಜಾನನ ನಾಯ್ಕ ತಳ್ಳಿಕೇರಿ ಆಯ್ಕೆಯಾದರು. ಈ ಸಭೆಗೆ ರಾಜ್ಯ ಉಪಾಧ್ಯಕ್ಷ ಗಂಗಾಧರ ಹೆಗಡೆ ಮತ್ತು ಜಿಲ್ಲಾಧ್ಯಕ್ಷ ಎಸ್.ಎನ್.ಭಟ್ಟ ಭಾಗವಹಿಸಿದ್ದರು.
ತಾಲೂಕು ಉಪಾಧ್ಯಕ್ಷರಾಗಿ ಗುರು ಭಟ್ಟ ಹಾಸಣಗಿ, ಕಾರ್ಯದರ್ಶಿಯಾಗಿ ವಿಶಾಲ ವಾಳಂಬಿ, ಸಹಕಾರ್ಯದರ್ಶಿಯಾಗಿ ಗಿರೀಶ ಭಾಗ್ವತ್ ಆಯ್ಕೆಯಾದರು. ಮಹಿಳಾ ಪ್ರಮುಖೆಯಾಗಿ ವಿನುತಾ ಭಟ್ಟ, ಸಹ ಪ್ರಮುಖೆ ವಿದ್ಯಾ ಭಟ್ಟ, ಸತ್ಸಂಗ ಪ್ರಮುಖರಾಗಿ ರಚನಾ ಭಟ್ಟ, ಸರೋಜಾ ಹೆಗಡೆ, ದುರ್ಗಾವಾಹಿನಿ ಪ್ರಮುಖ ಮಹಾದೇವಿ ಭಟ್ಟ ಮತ್ತು ಸಹ ಪ್ರಮುಖೆಯಾಗಿ ದಮಯಂತಿ ಕೌವಡಿಕೇರಿ ಆಯ್ಕೆಯಾದರು.
ಯಲ್ಲಾಪುರ ನಗರದ ಅಧ್ಯಕ್ಷರಾಗಿ ಅನಂತ ಗಾಂವ್ಕರ್, ಕಾರ್ಯದರ್ಶಿಯಾಗಿ ಅರುಣ ಶೆಟ್ಟಿ, ಸಹಕಾರ್ಯದರ್ಶಿಯಾಗಿ ವಿಜು ಆಚಾರಿ ಮತ್ತು ಪ್ರಭಾಕರ ನಾಯ್ಕ ಆಯ್ಕೆಯಾದರು. ಸತ್ಸಂಗ ಪ್ರಮುಖರಾಗಿ ಕಲ್ಪನಾ ನಾಯ್ಕ ಕಲ್ಮಠ ಆಯ್ಕೆಯಾದರು.