Adv

news21 ‌ ‌YELLAPURNews prakatane --------- ‌ kumar Oct9to15 ‌ ‌ ‌ ‌ IMG-20241009-195526

Saturday, 5 October 2024

ಯಲ್ಲಾಪುರ ಭೂ ನ್ಯಾಯ ಮಂಡಳಿಗೆ ಪೂಜಾ, ವಿಕಾಸ, ಅಣ್ಣಪ್ಪ, ಜಗ್ಗು ಹುಂಬೆ ಸದಸ್ಯರಾಗಿ ಆಯ್ಕೆ

IMG-20241005-172126 ಯಲ್ಲಾಪುರ: ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲ್ಲೂಕು ಭೂ ನ್ಯಾಯಮಂಡಳಿಗೆ ನಾಲ್ವರು ಅಧಿಕಾರೇತರ ಸದಸ್ಯರನ್ನು ರಾಜ್ಯಪಾಲರ ಆಜ್ಞಾನುಸಾರ ನಾಮನಿರ್ದೇಶನ ಮಾಡಲಾಗಿದೆ. ಕಂದಾಯ ಇಲಾಖೆ (ಭೂ ಸುಧಾರಣೆ) ಸರ್ಕಾರದ ಅಧೀನ ಕಾರ್ಯದರ್ಶಿ ಆರ್. ಗೌರಮ್ಮ ಅವರು ಈ ಆದೇಶ ಹೊರಡಿಸಿದ್ದಾರೆ. IMG-20241005-172114 ಶಿರಸಿ ಉಪ ವಿಭಾಗ ಸಹಾಯಕ ಆಯುಕ್ತರು ಭೂ ನ್ಯಾಯ ಮಂಡಳಿಯ ಅಧ್ಯಕ್ಷರಾಗಿದ್ದಾರೆ. ಪೂಜಾ ನಾಗರಾಜ ನೇತ್ರೇಕರ ಯಲ್ಲಾಪುರ ಪರಿಶಿಷ್ಟ ಜಾತಿಯ ಸದಸ್ಯರಾಗಿ ನಾಮನಿರ್ದೇಶನಗೊಂಡಿದ್ದಾರೆ. ಇನ್ನು ವಿಕಾಸ ನಾಯ್ಕ ಮಂಚಿಕೇರಿ, ಅಣ್ಣಪ್ಪ ಡಿ. ನಾಯ್ಕ ಕಣ್ಣಿಗೇರಿ, ಜಗ್ಗು ರಾಮು ಹುಂಬೆ ಹೊಸಳ್ಳಿ ಸಾಮಾನ್ಯ ಸದಸ್ಯರಾಗಿ ಆಯ್ಕೆಯಾಗಿದ್ದಾರೆ. ಯಲ್ಲಾಪುರ ತಹಶೀಲ್ದಾರರು ಮಂಡಳಿಯ ಸದಸ್ಯ ಕಾರ್ಯದರ್ಶಿಯಾಗಿದ್ದಾರೆ. 
     ಈ ನಾಮನಿರ್ದೇಶನದಿಂದ ಯಲ್ಲಾಪುರ ತಾಲ್ಲೂಕಿನ ಭೂ ವಿವಾದಗಳನ್ನು ಪರಿಹರಿಸುವಲ್ಲಿ ಹೆಚ್ಚಿನ ಸುಗಮತೆ ಲಭಿಸಲಿದೆ ಎಂದು ನಿರೀಕ್ಷಿಸಲಾಗಿದೆ. ಭೂ ನ್ಯಾಯಮಂಡಳಿಯ ಕಾರ್ಯವೈಖರಿಯಲ್ಲಿ ಪಾರದರ್ಶಕತೆ ಹಾಗೂ ಜನಸ್ನೇಹಿ ವಾತಾವರಣ ನಿರ್ಮಾಣಕ್ಕೆ ಈ ನಾಲ್ವರು ಸದಸ್ಯರು ಸಹಕಾರಿಯಾಗಲಿದ್ದಾರೆ ಎಂಬ ನಂಬಿಕೆ ಜನರಲ್ಲಿದೆ.