Adv

news21 ‌ ‌YELLAPURNews prakatane --------- ‌ kumar Oct9to15 ‌ ‌ ‌ ‌ IMG-20241009-195526

Monday, 2 September 2024

ಮಹಿಳಾ ಸಹಕಾರಿ ಸಂಘದ ದಶಮಾನೋತ್ಸವ: ಆರ್ಥಿಕ ಸಬಲತೆಗೆ ಒಂದು ಹೆಜ್ಜೆ/ ಸೆ.4ರಂದು ತಾಲೂಕಾ ಗ್ಯಾರಂಟಿಗಳ ಯೋಜನೆ ಅನುಷ್ಠಾನ ಸಮಿತಿ ಕಾರ್ಯಾಲಯ ಉದ್ಘಾಟನೆ


ಮಹಿಳಾ ಸಹಕಾರಿ ಸಂಘದ ದಶಮಾನೋತ್ಸವ: ಆರ್ಥಿಕ ಸಬಲತೆಗೆ ಒಂದು ಹೆಜ್ಜೆ

ಯಲ್ಲಾಪುರ : ಪಟ್ಟಣ ಪಂಚಾಯತ ಮಾಜಿ ಅಧ್ಯಕ್ಷೆ ಸುನಂದಾ ದಾಸ್ ಅವರು ಪ್ರಿಯದರ್ಶೀನಿ ಮಹಿಳಾ ವಿವಿಧೋದ್ದೇಶಗಳ ಸಹಕಾರಿ ಸಂಘದ ದಶಮಾನೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ, ಮಹಿಳೆಯರಲ್ಲಿ ಉಳಿತಾಯ ಯೋಜನೆಯ ಕುರಿತು ಜಾಗೃತಿ ಮೂಡಿಸುವಲ್ಲಿ ಸಂಘದ ಕೊಡುಗೆ ಮಹತ್ವದಾಗಿದೆ ಎಂದು ಹೇಳಿದರು.


 ಈ ಕಾರ್ಯಕ್ರಮವು ಇತ್ತೀಚೆಗೆ ಪಟ್ಟಣದ ಅಂಬೇಡ್ಕರ ಸಭಾಭವನದಲ್ಲಿ ನಡೆಯಿತು. ವಿಶ್ವದರ್ಶನ ಪ್ರೌಢಶಾಲೆಯ ಮುಖ್ಯೋಪಾದ್ಯಾಪಕಿ ಮುಕ್ತಾ ಶಂಕರ್ ಅವರು ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ, ಮಹಿಳೆಯರು ಇಂದು ಎಲ್ಲ ಕ್ಷೇತ್ರಗಳಲ್ಲೂ ಸಮಯ ಪಾಲನೆ ಮತ್ತು ಕ್ರಮನಿಷ್ಠೆಯಿಂದ ಭಾಗವಹಿಸುತ್ತಿದ್ದಾರೆ ಎಂದು ಹೇಳಿದರು. ಪ್ರಿಯದರ್ಶೀನಿ ಸಹಕಾರ ಸಂಘ ದಶಮಾನೋತ್ಸವದಲ್ಲಿರುವುದು ಇದಕ್ಕೆ ಸಾಕ್ಷಿಯಾಗಿದೆ ಎಂದು ಅವರು ಹೇಳಿದರು.

   ಪ.ಪಂ ಮಾಜಿ ಉಪಾಧ್ಯಕ್ಷೆ ಶ್ಯಾಮಿಲಿ ಪಾಟಣಕರ ಸೇರಿದಂತೆ ಪ.ಪಂ ಸದಸ್ಯರಾದ ಗೀತಾ ದೇಶಭಂಡಾರಿ, ಜ್ಯೋತಿ ನಾಯ್ಡು, ಸಾಮಾಜಿಕ ಕಾರ್ಯಕರ್ತೆ ತನುಜಾ ಬದ್ದಿ, ಪತ್ರಕರ್ತೆ ಪ್ರಭಾವತಿ ಗೋವಿ, ಕೆಡಿಡಿಸಿ ಸಂಸ್ಥೆ ಸಂಯೋಜಕ ಹರಿಶ್ಚಂದ್ರ ಇದೇ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಸಾಧಕ ಮಹಿಳೆಯರಿಗೆ, ವಿಕಲಚೇತನರಿಗೆ, ಪಿಗ್ಮಿದಾರರಿಗೆ ಮತ್ತು ಸದಸ್ಯರಿಗೆ ಸನ್ಮಾನಿಸಿ ಗೌರವಿಸಲಾಯಿತು.

  ವನಿತಾ ನಾಯ್ಕ ಪ್ರಾಸ್ತಾವಿಕ ಮಾತನಾಡಿದರು. ಮಿಲನ್ ಸ್ವಾಗತಿಸಿದರು ಮತ್ತು ಫತೇಜಾ ಕಾರ್ಯಕ್ರಮ ನಿರ್ವಹಿಸಿದರು.

ಸೆ.4ರಂದು ತಾಲೂಕಾ ಗ್ಯಾರಂಟಿಗಳ ಯೋಜನೆ ಅನುಷ್ಠಾನ ಸಮಿತಿ ಕಾರ್ಯಾಲಯ ಉದ್ಘಾಟನೆ

ಯಲ್ಲಾಪುರ: ತಾಲೂಕಾ ಗ್ಯಾರಂಟಿಗಳ ಯೋಜನೆ ಅನುಷ್ಠಾನ ಪ್ರಾಧಿಕಾರ, ಯಲ್ಲಾಪುರದ ಕಾರ್ಯಾಲಯವು ಸೆಪ್ಟೆಂಬರ್ 4, ರಂದು ಮಧ್ಯಾಹ್ನ 4 ಗಂಟೆಗೆ ಉದ್ಘಾಟನೆಗೊಳ್ಳಲಿದೆ. 


    ತಾಲೂಕಾ ಪಂಚಾಯತ್ ಭವನದಲ್ಲಿ ನಡೆಯುವ ಈ ಕಾರ್ಯಕ್ರಮಕ್ಕೆ ಬಂದರು, ಮೀನುಗಾರಿಕೆ ಮತ್ತು ಒಳನಾಡು ಜಲ ಸಾರಿಗೆ ಸಚಿವ ಹಾಗ ಜಿಲ್ಲಾ ಉಸ್ತುವಾರಿ ಸಚಿವ ಮಾಂಕಾಳು ವೈದ್ಯ, ಹಳಿಯಾಳ ಶಾಸಕ ಹಾಗೂ ರಾಜ್ಯ ಆಡಳಿತ ಸುಧಾರಣಾ ಸಮಿತಿ ಅಧ್ಯಕ್ಷರಾದ ಆರ್ ವಿ ದೇಶಪಾಂಡೆ, ಯಲ್ಲಾಪುರ ಶಾಸಕ ಶಿವರಾಮ ಹೆಬ್ಬಾರ್, ವಿಧಾನ ಪರಿಷತ್ ಸದಸ್ಯ ಶಾಂತಾರಾಮ್ ಸಿದ್ಧಿ ಹಾಗೂ ಜಿಲ್ಲಾ ಗ್ಯಾರಂಟಿಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಸತೀಶ್ ಪಿ ನಾಯ್ಕ ಉಪಸ್ಥಿತರಿರುವರು ಎಂದು ತಾಲೂಕಾ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷರು ದೇವಿದಾಸ ನಾಗೇಶ ಶಾನಭಾಗ್ ತಿಳಿಸಿದ್ದಾರೆ.