Adv

news21 ‌ ‌YELLAPURNews prakatane --------- ‌ kumar Oct9to15 ‌ ‌ ‌ ‌ IMG-20241009-195526

Sunday, 15 September 2024

ಕರಡು ಕಸ್ತೂರಿರಂಗನ್ ವರದಿ ವಿರೋದಕ್ಕೆ ಬದ್ಧ: ಸರ್ಕಾರಕ್ಕೆ ಗಾಂಭೀರ್ಯತೆ ಅರಿವಿದೆ, ನಿಲುವು ಜನಪರವಾಗಿರುವದು: ಮಂಕಾಳ ವೈದ್ಯ.

IMG-20240915-134218 ಹೊನ್ನಾವರ: ಅವೈಜ್ಞಾನಿಕ ಕಸ್ತೂರಿರಂಗನ್ ವರದಿಯ ಕುರಿತು ಸರಕಾರಕ್ಕೆ ಗಾಂಭೀರ್ಯತೆಯ ಅರಿವಿದೆ. ಸರಕಾರದ ನಿಲುವು ಜನಪರವಾಗಿರುವದು. ಅಲ್ಲದೇ, ಕರಡು ಕಸ್ತೂರಿರಂಗನ್ ವರದಿ ವಿರೋಧಕ್ಕೆ ಸರ್ಕಾರ ಬದ್ಧವಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಹೇಳಿದರು. 
   ಸೆ.19 ರಂದು ಕಸ್ತೂರಿರಂಗನ್ ವರದಿ ಕುರಿತು, ಬೆಂಗಳೂರಿನಲ್ಲಿ ಜನಪ್ರತಿನಿಧಿಗಳ ಸಭೆ ಹಾಗೂ ಸೆ.25 ರಂದು ರಾಜ್ಯ ಸರಕಾರ ವರದಿಯ ಕುರಿತು ನಿಲುವು ಪ್ರಕಟಿಸುವದರಿಂದ, ಅರಣ್ಯವಾಸಿಗಳ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ನೇತೃತ್ವದಲ್ಲಿ ಇಂದು ಸಚಿವರ ಹೊನ್ನಾವರ ತಾಲೂಕಿನ ಕಛೇರಿಯಲ್ಲಿ ನಿಯೋಗ ಭೇಟಿಯಾಗಿ ಮನವಿ ನೀಡಿದ ಸಂದಂರ್ಭದಲ್ಲಿ ಮೇಲಿನಂತೆ ಹೇಳಿದರು. IMG-20240915-134203 ಕಸ್ತೂರಿರಂಗನ್ ವರದಿ ಸಚಿವ ಸಂಪುಟ ಉಪಸಮಿತಿ ಸದ್ಯಸರು ಆಗಿರುವ ಸಚಿವರು, ವರದಿ ತಿರಸ್ಕರಿಸಲು ತೀವ್ರ ಒತ್ತಡ ರಾಜ್ಯಾದಂತ ಇದ್ದು, ವರದಿ ತಿರಸ್ಕರಿಸಲು ಒತ್ತಡ ತರಲಾಗುವದು ಎಂದು ಅವರು ನಿಯೋಗಕ್ಕೆ ಭರವಸೆ ನೀಡಿದರು. 
   ಉತ್ತರ ಕನ್ನಡದಲ್ಲಿ ವರದಿಯಿಂದ ಜನರ ಮೂಲಭೂತ ಸೌಕರ್ಯ ಮತ್ತು ಅರಣ್ಯವಾಸಿಗಳ ಹಕ್ಕಿಗೆ ಆತಂಕ ಉಂಟಾಗುವದು ಎಂದು ಅವರು ತಿಳಿಸಿದರು.  
  ಚರ್ಚೆಯಲ್ಲಿ ಪ್ರಧಾನ ಸಂಚಾಲಕ ಜೆ.ಎಮ್.ಶೆಟ್ಟಿ, ಮಾತನಾಡಿ ವರದಿ ಜಾರಿಯಿಂದ ಜನರ ಸ್ವಾತಂತ್ರ ಜೀವನಕ್ಕೆ ಭಾದಕ ಉಂಟಾಗುವದು ಎಂದು ಅವರು ಹೇಳಿದರು. IMG-20240915-134153 ನಿಯೋಗದಲ್ಲಿ ದೇವರಾಜ್ ಗೊಂಡ, ಬಾಲಚಂದ್ರ ಶೆಟ್ಟಿ ಅಚವೆ, ಮಹಾಬಲೇಶ್ವರ ನಾಯ್ಕ ಬೇಡ್ಕಣಿ, ಸಂಕೇತ್ ಹೊನ್ನಾವರ, ದಿನೇಶ್ ನಾಯ್ಕ್ ಸಿದ್ದಾಪುರ, ವಿನೋದ ನಾಯ್ಕ ಎಲ್ಲೋಟ್ಗಿ, ಚಂದು ಬೆಳಕೆ, ಸುರೇಶ ಕರ್ಕೋ, ಅಯೂಬನಗರ, ಉತ್ತರಕನ್ನಡ ಮುಂತಾದವರು ಉಪಸ್ಥಿತರಿದ್ದರು. 
 ಅವೈಜ್ಞಾನಿಕ ವರದಿ: 
 ಕಸ್ತೂರಿರಂಗನ್ ವರದಿ ಅವೈಜ್ಞಾನಿಕವಾಗಿದ್ದು, ಸೆಟಲೈಟ್ ಚಿತ್ರಣದ ಮೂಲಕ ತಯಾರಿಸಿದ ವರದಿಯು ವಾಸ್ತವಿಕ ಮತ್ತು ನೈಜತೆಯ ಚಿತ್ರಣಕ್ಕೆ ವೈತಿರಿಕ್ತವಾಗಿದೆ. ಅಲ್ಲದೇ ಗ್ರಾಮದ ಶೇ. 20 ಕ್ಕಿಂತ ಹೆಚ್ಚು ಭೌಗೋಳಿಕ ಪ್ರದೇಶ ಜೀವಿವೈವಿಧ್ಯ ಪರಿಸರ ಸೂಕ್ಷ್ಮವಾಗಿರುವ ಮಾನದಂಡದ ಅಡಿಯಲ್ಲಿ ಸೂಕ್ಷ್ಮ ಪ್ರದೇಶವೆಂದು ಗುರುತಿಸುವುದು ಅವೈಜ್ಞಾನಿಕ ಎಂದು ಅಧ್ಯಕ್ಷ ರವೀಂದ್ರ ನಾಯ್ಕ ಚರ್ಚೆಯ ಸಂದಂರ್ಭದಲ್ಲಿ ಹೇಳಿದರು.
.
.
.