

ಜಗನ್ನಾಥ ನಾಯ್ಕರ ಪುತ್ರಿ ಕೃತಿಕಾ ಮತ್ತು ಪಲ್ಲವಿ ಅವರಿಗೆ ತಾತ್ಕಾಲಿಕವಾಗಿ ಕೈಗಾ ಅಣು ಶಕ್ತಿ ಸ್ಥಾವರ ಮತ್ತು ಕಾರವಾರ ಪ್ರವಾಸೋಧ್ಯಮ ಇಲಾಖೆಯಲ್ಲಿ ಉದ್ಯೋಗ ಸಿಕ್ಕಿದ್ದು, ಇವು ಅವರಿಗೆ ಆರ್ಥಿಕ ಸಹಾಯದ ಜೊತೆಗೆ ಭವಿಷ್ಯದಲ್ಲಿ ಒಂದು ಚಿಕ್ಕ ಬೆಳಕು ಮೂಡಿಸಿವೆ. ದುರಂತದ ಪರಿಣಾಮವಾಗಿ ತಮ್ಮ ಕುಟುಂಬವನ್ನು ಕಳೆದುಕೊಂಡಿದ್ದರೂ, ಈಗ ಅವರ ಜೀವನದಲ್ಲಿ ಹೊಸ ಬೆಳವಣಿಗೆಗಳು ಕಾಣಿಸುತ್ತಿವೆ.
ಈ ಬೆಳವಣಿಗೆ ಕುರಿತಂತೆ ರಾಮು ನಾಯ್ಕ ಮಾತನಾಡಿ, "ರಾಜಕಾರಣಿಗಳು ಹಲವಾರು ಬಾರಿ ದುರಂತಗಳ ಸಂದರ್ಭದಲ್ಲಿ ಭರವಸೆ ನೀಡುತ್ತಾರೆ. ಆದರೆ ಅವುಗಳನ್ನು ಈಡೇರಿಸಲು ಬಹಳ ಸಮಯ ತೆಗೆದುಕೊಳ್ಳುತ್ತಾರೆ. ಆದರೆ ಶಿರೂರು ಘಟನೆಯಲ್ಲಿ, ಸಚಿವರು ತಮ್ಮ ಮಾತನ್ನು ಬೇಗನೆ ಪೂರೈಸಿದ್ದಾರೆ. ಇದು ಇತರರಿಗೆ ಮಾದರಿಯಾಗಿದೆ" ಎಂದಿದ್ದಾರೆ.
ಹೆಚ್.ಡಿ.ಕುಮಾರಸ್ವಾಮಿ, ಮಂಕಾಳು ವೈದ್ಯರು ಹಾಗೂ ಶಾಸಕ ಸತೀಶ ಸೈಲ್, ಜೆಡಿಎಸ್ ನಾಯಕ ಸೂರಜ ನಾಯ್ಕ ಸೋನಿ ಹಾಗೂ ಜಿಲ್ಲಾಡಳಿತದ ಸಹಕಾರದಿಂದ, ಈ ಕೆಲಸವನ್ನು ಸಾಧ್ಯ ಮಾಡಲಾಗಿದೆ ಎಂದು ನಾಗರಿಕ ವೇದಿಕೆಯ ಸಮನತಸ ವ್ಯಕ್ತಪಡಿಸಿದೆ.
ಶಿರೂರು ದುರಂತದಲ್ಲಿ ಇನ್ನೂ ಅನೇಕರು ನಾಪತ್ತೆಯಾಗಿದ್ದು, ಅವರಿಗಾಗಿ ಹುಡುಕಾಟ ನಡೆಯುತ್ತಲೇ ಇದೆ. ಈ ಕುರಿತು ರಾಮು ನಾಯ್ಕ, "ಮತ್ತೆ ಹಲವಾರು ಕುಟುಂಬಗಳು ತಮ್ಮ ಆಸ್ತಿ-ಪಾಸ್ತಿಗಳನ್ನು ಕಳೆದುಕೊಂಡಿವೆ. ಈ ಕುಟುಂಬಗಳ ಬವಣೆಗಳನ್ನು ಸಮರ್ಪಕವಾಗಿ ಪರಿಹರಿಸಲು ಸರಕಾರವು ಇನ್ನಷ್ಟು ಗಮನಹರಿಸಬೇಕು" ಎಂದು ಆಗ್ರಹಿಸಿದ್ದಾರೆ.
.
.
.