Adv

news21 ‌ ‌YELLAPURNews prakatane --------- ‌ kumar Oct9to15 ‌ ‌ ‌ ‌ IMG-20241009-195526

Wednesday, 4 September 2024

ಸಹ್ಯಾದ್ರಿ ಸಹಕಾರಿ ಸಂಘ: 41.44 ಲಕ್ಷ ರೂಪಾಯಿ ಲಾಭ


ಯಲ್ಲಾಪುರ: ಸಹ್ಯಾದ್ರಿ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರಿ ಸಂಘವು ಕಳೆದ ವರ್ಷ 41.44 ಲಕ್ಷ ರೂಪಾಯಿ ಲಾಭ ಗಳಿಸಿದೆ. ಗುಣಮಟ್ಟದ ಸೇವೆ, ನಿಖರ ತೂಕ ಮತ್ತು ಸಿಬ್ಬಂದಿಯ ಆತ್ಮೀಯ ಒಡನಾಟ ಇದಕ್ಕೆ ಕಾರಣ ಎಂದು ಸಂಘದ ಅಧ್ಯಕ್ಷ ಉಮೇಶ ಭಾಗ್ವತ್ ಮಂಗಳವಾರ ಬೆಳಿಗ್ಗೆ ಎಪಿಎಂಸಿ ಶಾಖೆಯಲ್ಲಿ ಸುದ್ದಿಗೋಷ್ಠಿ ನಡೆಸಿ ತಿಳಿಸಿದರು.

   ಕಳೆದ ವರ್ಷ ಸಂಘವು ಶೇ 8ರಷ್ಟು ಡಿವಿಡೆಂಟ್ ನೀಡಿದೆ. ಈ ವರ್ಷ ಸದಸ್ಯರ ಸಭೆಯಲ್ಲಿ ಡಿವಿಡೆಂಟ್ ಘೋಷಣೆ ಮಾಡಲಾಗುವುದು. ಕಳಚೆ ಗ್ರಾಮ ಮೂಲವಾಗಿರುವ ಈ ಸಂಘವು ಕಳಚೆ ಮತ್ತು ಭಾಗಿನಕಟ್ಟಾ ಪ್ರದೇಶಗಳನ್ನು ತನ್ನ ಕಾರ್ಯಕ್ಷೇತ್ರವಾಗಿ ಹೊಂದಿದೆ. ಯಲ್ಲಾಪುರ ಸೇರಿದಂತೆ ವಿವಿಧ ಪ್ರದೇಶಗಳು ಸಂಘದ ವ್ಯವಹಾರಿಕ ಕ್ಷೇತ್ರಗಳಾಗಿವೆ.


  ಕಳೆದ ಎರಡು ವರ್ಷಗಳಿಂದ ಸಂಘವು ಅಡಿಕೆ ವಿಕ್ರಿ ವಹಿವಾಟು ನಡೆಸುತ್ತಿದೆ. 10 ಸಹಕಾರಿ ಸಂಘಗಳ ಸಹಕಾರದೊಂದಿಗೆ ಈ ಕಾರ್ಯವನ್ನು ಮುಂದುವರೆಸಲಾಗಿದೆ. ಜೊಯಿಡಾ, ಶಿರಸಿ, ಅಂಕೋಲಾದ ಕೆಲ ಸಹಕಾರಿ ಸಂಘಗಳು ಸಹ್ಯಾದ್ರಿ ಸಂಘದಲ್ಲಿ ಖಾತೆ ತೆರೆದಿವೆ.

    ಈ ವರ್ಷದಿಂದ 'ಸಹ್ಯಾದ್ರಿ ಕ್ಷೇಮನಿಧಿ' ಎಂಬ ಯೋಜನೆಯನ್ನು ಪ್ರಾರಂಭಿಸಲಾಗಿದೆ. ಸಂಘದಲ್ಲಿ ವ್ಯವಹಾರ ನಡೆಸುವವರ ಅಕಾಲಿಕ ಮರಣ ಹಾಗೂ ಆಪತ್ಕಾಲದಲ್ಲಿ ಆರ್ಥಿಕ ಸಹಾಯ ನೀಡುವುದು ಈ ಯೋಜನೆಯ ಮುಖ್ಯ ಉದ್ದೇಶ. ಕನಿಷ್ಠ 25 ಸಾವಿರ ರೂಪಾಯಿಗಳಿಂದ 1 ಲಕ್ಷ ರೂಪಾಯಿಯವರೆಗೆ ಆರ್ಥಿಕ ನೆರವು ಸಿಗುತ್ತದೆ ಎಂದು ಭಾಗ್ವತ್ ವಿವರಿಸಿದರು.

   'ಸಹ್ಯಾದ್ರಿ ಕ್ಷೇಮನಿಧಿ' ಯೋಜನೆಯ ಸದುಪಯೋಗಕ್ಕಾಗಿ ಸಂಘದ ಮೂಲಕ ಅಡಿಕೆ ವಿಕ್ರಿ ಮಾಡುವುದು ಕಡ್ಡಾಯ ಎಂದು ನಿಯಮಗಳ ಬಗ್ಗೆ ತಿಳಿಸಿದರು.

   ಸಂಘದ ಉಪಾಧ್ಯಕ್ಷ ರಾಘವೇಂದ್ರ ಕೋಣೆಮನೆ, ನಿರ್ದೇಶಕರಾದ ರಾಘವೇಂದ್ರ ಭಟ್ಟ, ಸೂರ್ಯನಾರಾಯಣ ಭಟ್ಟ, ಶ್ರೀಕಾಂತ ಹೆಬ್ಬಾರ, ರಾಮಕೃಷ್ಣ ಹೆಗಡೆ, ಶ್ರೀಪಾದ ಗಾಂಯ್ಕರ, ಗಣಪತಿ ಗೌಡ, ಅರುಣ ನಾಯ್ಕ, ವಿನುತಾ ಗದ್ದೆ, ಮುಖ್ಯಕಾರ್ಯನಿರ್ವಾಹಕ ದತ್ತಾತ್ರೇಯ ಹೆಗಡೆ, ಶಾಖಾ ವ್ಯವಸ್ಥಾಪಕ ಅನಂತ ಹೆಗಡೆ ಇದ್ದರು.