Adv

news21 ‌ ‌YELLAPURNews prakatane --------- ‌ kumar Oct9to15 ‌ ‌ ‌ ‌ IMG-20241009-195526

Tuesday, 3 September 2024

ಯಲ್ಲಾಪುರದಲ್ಲಿ ತೆಂಗಿನ ಮರದ ಉರುಳಿ ಮನೆಗೆ ಹಾನಿ : ನರ್ಮದಾ ನಾಯ್ಕ ಭೇಟಿ


ಯಲ್ಲಾಪುರ : ಪಟ್ಟಣದ ಗೋಪಾಲಕೃಷ್ಣಗಲ್ಲಿಯಲ್ಲಿ ಸೋಮವಾರ ಸಂಜೆ 5:00 ಗಂಟೆಯ ಸುಮಾರಿಗೆ ಭಾರೀ ಮಳೆ ಗಾಳಿಯಿಂದಾಗಿ ತೆಂಗಿನ ಮರ ಒಂದು ಬುಡದಲ್ಲಿ ಕತ್ತರಿಸಿ ಮನೆಯ ಮೇಲೆ ಬಿದ್ದು ಅಪಾರ ಹಾನಿಯಾಗಿದೆ.


 ಗೋಪಾಲಕೃಷ್ಣ ಗಲ್ಲಿ ನಿವಾಸಿ ಉಲ್ಲಾಸ ಬಾಂದೇಕರ ಅವರ ಮನೆಯ ಮೇಲೆ ಮರ ಬಿದ್ದಿದೆ. ಈ ಘಟನೆಯಲ್ಲಿ ಮನೆಯ ಒಂದು ಭಾಗದ ಸಂಪೂರ್ಣ ಹಂಚುಗಳು, ಪಕಾಶಿ ರೀಪು ಕಿತ್ತು ಬಿದ್ದಿವೆ. ಮನೆಯ ಬೆಲೆಬಾಳುವ ಸಾಮಗ್ರಿಗಳಿಗೂ ಹಾನಿಯಾಗಿದೆ.  


   ಮಂಗಳವಾರ ಬೆಳಿಗ್ಗೆ ಪಟ್ಟಣ ಪಂಚಾಯಿತಿ ಅಧ್ಯಕ್ಷ ನರ್ಮದಾ ನಾಯ್ಕ್ ಹಾಗೂ ವಾರ್ಡ್ ಸದಸ್ಯ ಸೈಯದ್ ಕೆಸರಲ್ಲಿ ಮರ ಬಿದ್ದ ಮನೆಗೆ ಭೇಟಿ ನೀಡಿ ಪರಿಶೀಲಿಸಿದರು. ಈ ಸಂದರ್ಭದಲ್ಲಿ ಉಲ್ಲಾಸ್ ಬಾಂದೇಕರ್ ಹಾನಿಯ ವಿವರವನ್ನು ಅಧ್ಯಕ್ಷರು ಹಾಗೂ ಸದಸ್ಯರಿಗೆ ನೀಡಿದರು.