Adv

news21 ‌ ‌YELLAPURNews prakatane --------- ‌ kumar Oct9to15 ‌ ‌ ‌ ‌ IMG-20241009-195526

Friday, 6 September 2024

ನಿವೃತ್ತ ಶಿಕ್ಷಕಿ ಮೈಮೂನಾ ದಾವೂದ್ ಶೇಖ್‌ರವರಿಗೆ ಶಿಷ್ಯಂದಿರಿಂದ ಸನ್ಮಾನ

IMG-20240906-205039ಯಲ್ಲಾಪುರ: ಕಳೆದ 40 ವರ್ಷಗಳ ಹಿಂದೆ ಯಲ್ಲಾಪುರದ ಉರ್ದು ಶಾಲೆಯಲ್ಲಿ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಮೈಮೂನಾ ದಾವೂದ್ ಶೇಖ್ ಅವರನ್ನು ಅವರ ಶಿಷ್ಯಂದಿರು ಶಿಕ್ಷಕರ ದಿನಾಚರಣೆಯಂದು ಸನ್ಮಾನಿಸಿ ಗೌರವಿಸಿದರು. ಶಿಕ್ಷಕರ ದಿನಾಚರಣೆಯಂದು ಯಲ್ಲಾಪುರದಿಂದ ನೂರಾರು ಕಿಲೋಮೀಟರ್ ದೂರದಲ್ಲಿರುವ ಕಾರವಾರ ಕೋಡಿಭಾಗಕ್ಕೆ ತೆರಳಿ, ಮೈಮೂನಾ ದಾವೂದ್ ಶೇಖ್ ಅವರನ್ನು ಅವರ ಶಿಷ್ಯಂದಿರು ಸನ್ಮಾನಿಸಿದರು. ಶಿಕ್ಷಕಿ ಅವರು ಕಲಿಸಿದ ಅಕ್ಷರ ಪಾಠವು ಅವರ ಜೀವನದ ಮೇಲೆ ಆಳವಾದ ಪ್ರಭಾವ ಬೀರಿದೆ ಎಂದು ಅವರು ತಿಳಿಸಿದರು. ಅವರನ್ನು ನೆನಪಿಸಿಕೊಂಡು ಕೃತಜ್ಞತೆ ಸಲ್ಲಿಸಲು ಅವರು ದೂರದ ಪ್ರಯಾಣ ಮಾಡಿದರು. IMG-20240906-205031 ಶಿಷ್ಯಂದಿರ ಭೇಟಿಯಿಂದ ಭಾವುಕರಾದ ಮೈಮೂನಾ ದಾವೂದ್ ಶೇಖ್ ಅವರು ತಮ್ಮ ಶಿಷ್ಯಂದಿರೊಂದಿಗೆ ಹಳೆಯ ದಿನಗಳ ನೆನಪುಗಳನ್ನು ಮೆಲುಕು ಹಾಕಿದರು. ಅವರು ತಮ್ಮ ವಿದ್ಯಾರ್ಥಿಗಳೊಂದಿಗೆ ಕಳೆದ ಕ್ಷಣಗಳು ಅವರ ಜೀವನದಲ್ಲಿ ಅಮೂಲ್ಯವಾದವು ಎಂದು ಹೇಳಿದರು. ಶಿಷ್ಯಂದಿರು ಮೈಮೂನಾ ದಾವೂದ್ ಶೇಖ್ ಅವರ ಮನೆಗೆ ಭೇಟಿ ನೀಡಿ, ಅವರನ್ನು ಸನ್ಮಾನಿಸಿದರು. ಆ ಸಮಯದಲ್ಲಿ ಮೊಹಮ್ಮದ್ ಶಫಿ ಶೇಖ್, ಇಬ್ರಾಹಿಂ ಮುಲ್ಲಾ, ನಿಸಾರ್ ಶೇಖ್, ಯಾಕೂಬ್ ಸೈಯದ್, ಮೈನುದ್ದೀನ್ ಮುಲ್ಲಾ, ರಿಜ್ವಾನ್ ಖಾನ್, ಹಿಫ್ಜಾ ಶೇಖ್, ರಮೀಜಾ ಶೇಖ್, ಫರ್ಹಾತ್ ಶೇಖ್, ಹಲೀಮಾ ಶೇಖ್ ಮತ್ತು ಬೀಬಿ ಶಮೀಮ್ ಉಪಸ್ಥಿತರಿದ್ದರು. IMG-20240906-205016 ಈ ಘಟನೆಯೂ ಒಳ್ಳೆಯ ಶಿಕ್ಷಕರು ಒಳ್ಳೆಯ ವಿದ್ಯಾರ್ಥಿಗಳ ಬಾಂಧವ್ಯವನ್ನು‌ ಪ್ರತಿಬಿಂಬಿಸುತ್ತದೆ. ಉತ್ತಮ ಶಿಕ್ಷಕರು ಮಕ್ಕಳ ಮೇಲೆ ಬೀರುವ ಅಪಾರ ಪ್ರಭಾವವನ್ನು ಸಾಬೀತುಪಡಿಸುತ್ತದೆ. 40 ವರ್ಷಗಳ ನಂತರವೂ ತಮ್ಮ ಶಿಕ್ಷಕರನ್ನು ಮರೆಯದೆ, ಅವರನ್ನು ಸನ್ಮಾನಿಸಿ, ಅವರನ್ನು ಗೌರವಿಸಿದ ಶಿಷ್ಯಂದಿರ ಈ ಕಾರ್ಯವು ಶ್ಲಾಘನೀಯವಾಗಿದೆ. ‌

ಸುಜ್ಞಾನ ನಿಧಿ ಶಿಷ್ಯವೇತನ ಮಂಜೂರಾತಿ ಪತ್ರ ವಿತರಣೆ: ಯುವಜನತೆಗೆ ಹೊಸ ಅವಕಾಶಗಳ ದ್ವಾರ

IMG-20240906-184259ಯಲ್ಲಾಪುರ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬಿಸಿ ಟ್ರಸ್ಟ್, ಯಲ್ಲಾಪುರ ಮುಂಡಗೋಡ ತಾಲೂಕಿನಲ್ಲಿ ವೃತ್ತಿಪರ ಕೋರ್ಸ್‌ಗಳಿಗೆ ಸಂಬಂಧಿಸಿದಂತೆ ಮಕ್ಕಳಿಗೆ ಸುಜ್ಞಾನ ನಿಧಿ ಶಿಷ್ಯವೇತನ ಮಂಜೂರಾತಿ ಪತ್ರ ವಿತರಣಾ ಕಾರ್ಯಕ್ರಮವನ್ನು ಯಶಸ್ವಿಯಾಗಿ ಹಮ್ಮಿಕೊಂಡಿತು. ಜಿಲ್ಲಾ ನಿರ್ದೇಶಕ ಎ. ಬಾಬು ನಾಯ್ಕ ಅವರು ಮಾತನಾಡಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿಸಿ ಟ್ರಸ್ಟ್ ಕರ್ನಾಟಕ ರಾಜ್ಯದಲ್ಲಿ ಇದುವರೆಗೆ 97,000ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಸುಮಾರು 114 ಕೋಟಿಯಷ್ಟು ಸುಜ್ಞಾನ ನಿಧಿ ಶಿಷ್ಯವೇತನ ಮಂಜೂರಾತಿ ವಿತರಿಸಿದೆ ಎಂದು ತಿಳಿಸಿದರು. ಯಲ್ಲಾಪುರ ಮುಂಡಗೋಡ ತಾಲೂಕಿನಲ್ಲಿ 130 ವಿದ್ಯಾರ್ಥಿಗಳಿಗೆ ಶಿಷ್ಯವೇತನ ಮಂಜೂರಾತಿ ನೀಡಲಾಗಿದೆ. ಈ ಯೋಜನೆಯು ನವ ಜೀವನ ಮತ್ತು ನವ ಸಮಾಜ ನಿರ್ಮಾಣಕ್ಕಾಗಿ ಸುಜ್ಞಾನ ನಿಧಿ ಶಿಷ್ಯವೇತನ, ಪ್ರಗತಿ ನಿಧಿ ಕಾರ್ಯಕ್ರಮ, ಜ್ಞಾನದೀಪ ಗೌರವ ಶಿಕ್ಷಕರ ನಿಯೋಜನೆ ಸೇರಿದಂತೆ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಇದರ ಜೊತೆಗೆ, ಆಪತ್ತು ಕಾಲದಲ್ಲಿ ಆಪ್ತರಕ್ಷಕ ಶೌರ್ಯ ಸ್ವಯಂ ಸೇವಾ ಘಟಕ,IMG-20240906-184251 ಯಂತ್ರ ಶ್ರೀ ಯಾತ್ರಿಕೃತ ಬತ್ತ ಬೇಸಾಯ ಯೋಜನೆ ಮತ್ತು ಮಹಿಳೆಯರಿಗೆ ಜ್ಞಾನವಿಕಾಸ ಕಾರ್ಯಕ್ರಮಗಳನ್ನು ಸಹ ಈ ಯೋಜನೆಯಡಿಯಲ್ಲಿ ನಡೆಸಲಾಗುತ್ತಿದೆ. ಈ ಎಲ್ಲಾ ಕಾರ್ಯಕ್ರಮಗಳು ಸಮಾಜದ ಸರ್ವತೋಮುಖ ಅಭಿವೃದ್ಧಿಗೆ ಸಹಕಾರಿಯಾಗುತ್ತಿವೆ. ಯೋಜನಾಧಿಕಾರಿಗಳು ಹನುಮಂತ ನಾಯ್ಕ ಅವರು ಮಾತನಾಡಿ, ಯುವ ಜನತೆ ತಮ್ಮ ಉಜ್ವಲ ಭವಿಷ್ಯಕ್ಕಾಗಿ ತಮ್ಮ ಪೋಷಕರು ಮತ್ತು ಗುರುಗಳ ಮಾರ್ಗದರ್ಶನವನ್ನು ಪಡೆದುಕೊಂಡು, ನಾಡು, ನುಡಿ, ಸಂಸ್ಕೃತಿ ಮತ್ತು ಜೀವನದ ಮೌಲ್ಯಗಳನ್ನು ತಿಳಿದುಕೊಳ್ಳಬೇಕು ಎಂದು ಹೇಳಿದರು.IMG-20240906-184241 ಈ ಕಾರ್ಯಕ್ರಮದಲ್ಲಿ ಶಿರಸಿ ಜಿಲ್ಲಾ ನಿರ್ದೇಶಕರು ಎ. ಬಾಬು ನಾಯ್ಕ, ಜಿಲ್ಲಾ ಜನ ಜಾಗೃತಿ ವೇದಿಕೆಯ ಅಧ್ಯಕ್ಷರು ಡಿ ಎನ್ ಗೌಂವ್ಕರ್, ಯೋಜನೆಯ ಯೋಜನಾಧಿಕಾರಿಗಳು, ಪತ್ರಕರ್ತರು ಪ್ರಭಾವತಿ ಮತ್ತು ಜೈ ರಾಜ್, ಜ್ಞಾನವಿಕಾಸ ಸಮನ್ವ್ಯಾಧಿಕಾರಿ ಚೈತ್ರ, ಸೇವಾ ಪ್ರತಿನಿಧಿಗಳು ಮಂಜುನಾಥ್ ಹೆಗಡೆ, ಸುಮಂಗಲ, ಅನಿತಾ, ವಿದ್ಯಾರ್ಥಿಗಳು ಮತ್ತು ಪಾಲಕರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ವಲಯದ ಮೇಲ್ವಿಚಾರಕರು ಮಹಾಂತೇಶ ಸ್ವಾಗತಿಸಿ ವಂದಿಸಿದರು.

ಯಲ್ಲಾಪುರ ತಹಶೀಲ್ದಾರ ಅಶೋಕ ಭಟ್ಟ ಮೂಲ ಸ್ಥಾನಕ್ಕೆ, ಹೊಸ ತಹಶೀಲ್ದಾರ ಆಗಮನ

IMG-20240906-182446ಯಲ್ಲಾಪುರ : ಕಳೆದ ಮೂರು ತಿಂಗಳಿಂದ ಯಲ್ಲಾಪುರದ ತಹಶೀಲ್ದಾರರಾಗಿ ಕಾರ್ಯ ನಿರ್ವಹಿಸುತ್ತಿದ್ದ ಅಶೋಕ್ ಭಟ್ ಅವರು ತಮ್ಮ ಮೂಲ ಸ್ಥಾನಕ್ಕೆ ನಿಯೋಜಿತಗೊಂಡು ವರ್ಗಾವಣೆಯಾಗಿದ್ದಾರೆ. ಅವರ ಸ್ಥಾನದಲ್ಲಿ ಕಲಘಟಗಿ ತಹಶೀಲ್ದಾರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಯಲ್ಲಪ್ಪ ಗೊನೆಣ್ಣವರ ಶುಕ್ರವಾರ ಅಶೋಕ ಭಟ್ಟವರಿಂದ ಯಲ್ಲಾಪುರ ತಹಶೀಲ್ದಾರ್ ಅಧಿಕಾರ ಪದಬಾರ ವಹಿಸಿಕೊಂಡರು.IMG-20240906-182437 ಕಳೆದ ಮೂರು ತಿಂಗಳಿಂದ ಯಲ್ಲಾಪುರದ ತಹಶೀಲ್ದಾರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಅಶೋಕ್ ಭಟ್ ಅವರು, ಕಂದಾಯ ಇಲಾಖೆ ಸೇರಿದಂತೆ ಇನ್ನಿತರ ಇಲಾಖೆಗಳಲ್ಲಿ ಬಹಳಷ್ಟು ಆಡಳಿತ ಸುಧಾರಣೆಗಳನ್ನು ತಂದಿದ್ದರು. ಸಕ್ರಿಯವಾಗಿ ಎಲ್ಲದರಲ್ಲೂ ತೊಡಗಿಸಿಕೊಂಡಿದ್ದ ಅವರಿಗೆ ಯಲ್ಲಾಪುರದ ಜನತೆ ಮೆಚ್ಚಿಕೊಂಡಿದ್ದರು. ಇದೀಗ ತಮ್ಮ ಮೂಲ ಸ್ಥಾನವಾದ ಕುಮಟಾ ಸಹಾಯಕ ಆಯುಕ್ತರ ಕಚೇರಿಯ ತಹಶೀಲ್ದಾರ್ ಹುದ್ದೆಗೆ ಪುನಃ ಮರಳಿದ್ದಾರೆ. . ಕಲಘಟಗಿ ತಹಶೀಲ್ದಾರ ಆಗಿ ಕಾರ್ಯನಿರ್ವಹಿಸುತ್ತಿದ್ದ ಯಲ್ಲಪ್ಪ ಗೊನೆಣ್ಣವರ ಕಲಘಟಗಿಯಲ್ಲಿ ಒಳ್ಳೆಯ ಕೆಲಸಗಳನ್ನು ಮಾಡಿ ಜನರಲ್ಲಿ ಅಪಾರವಾದ ವಿಶ್ವಾಸವನ್ನು ಗಳಿಸಿಕೊಂಡಿದ್ದರು ಎನ್ನುವುದು ತಿಳಿದುಬಂದಿದೆ. . ಶುಕ್ರವಾರ ಸಂಜೆ ಸರಕಾರದ ಆದೇಶದಂತೆ ತಹಶೀಲ್ದಾರ ಯಲ್ಲಾಪುರ ಹುದ್ದೆಗೆ ಹೊಸದಾಗಿ ಪ್ರಭಾರ ವಹಿಸಿದ ಯಲ್ಲಪ್ಪ ಗೊನೆಣ್ಣವರರವರಿಗೆ, ನಿಕಟ ಪೂರ್ವ ತಹಶೀಲ್ದಾರ ಆದ ಅಶೋಕ್ ಭಟ್ ಸರ್ ರವರು ಅಧಿಕಾರ ಹಸ್ತಾಂತರ ಮಾಡಿದರು.

ಕೌಶಲ್ಯ ತರಬೇತಿಯ ಮೂಲಕ ಮಹಿಳೆಯರಿಗೆ ಸ್ವಾವಲಂಬನೆ: ಪಿಐ ಹಾನಾಪುರ

IMG-20240906-112352ಯಲ್ಲಾಪುರ : ಕೌಶಲ್ಯವಿಕಾಸ ತರಬೇತಿ ಪಡೆದುಕೊಂಡು ಮಹಿಳೆಯರು ಸ್ವಾವಲಂಬಿ ಜೀವನ ನಡೆಸಲು ಹಾಗೂ ಆರ್ಥಿಕ ಸಬಲತೆ ಹೊಂದಲು ಸಾಧ್ಯವಾಗುತ್ತದೆ ಎಂದು ಪೋಲೀಸ್ ನಿರೀಕ್ಷಕರಾದ ರಮೇಶ ಹೆಚ್ ಹಾನಾಪೂರ ಹೇಳಿದರು. ಅವರು ಇಂದು ಅಡಿಕೆ ಭವನದಲ್ಲಿ ಶಿರಸಿಯ ಗ್ರೀನ್ ಕೇರ್ ಸಂಸ್ಥೆ ಹಾಗೂ ಯಲ್ಲಾಪುರದ ಕ್ರಿಯೇಟಿವ್ ತರಬೇತಿ ಕೇಂದ್ರ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಕೌಶಲ್ಯ ವಿಕಾಸ ಯೋಜನೆ ಅಡಿಯಲ್ಲಿ ತರಬೇತಿ ಪಡೆದವರಿಗೆ ಪ್ರಮಾಣ ಪತ್ರ ವಿತರಣೆ ಹಾಗೂ ಹೊಸದಾಗಿ ಬ್ಯುಟೀಶಿಯನ್ ಮತ್ತು ಫ್ಯಾಶನ್ ಡಿಸ್ಟೆನಿಂಗ್ ತರಬೇತಿ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡಿದರು. IMG-20240906-112341 ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ತಾಲೂಕಾ ಆಸ್ಪತ್ರೆಯ ನೇತ್ರ ತಜ್ಞರಾದ ಡಾ.ಸೌಮ್ಯಕೆ.ವಿ ಮಾತನಾಡಿ, ಸ್ವ ಉದ್ಯೋಗ ಕೈಗೊಳ್ಳಲು ಕೌಶಲ್ಯ ವಿಕಾಸ ತರಬೇತಿ ನೆರವಾಗುವುದಲ್ಲದೆ ಮಹಿಳೆಯರ ಜೀವನಾಧಾರಕ್ಕೆ ಸಹಕಾರಿ ಆಗಿದೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಗ್ರೀನ್ ಕೇರ್ ಸಂಸ್ಥೆಯ ಮಾಧ್ಯಮ ಸಲಹೆಗಾರರಾದ ಅಶೋಕ ಹಾಸ್ಯಗಾರ ಅವರು ಮಾತನಾಡಿ ಕೌಶಲ್ಯ ತರಬೇತಿ ಪಡೆದ ಫಲಾನುಭವಿಗಳು ತಮ್ಮ ಉತ್ಪಾದನೆಗೆ ಆಧುನಿಕತೆಯ ಸ್ಪರ್ಶ ನೀಡಬೇಕು. ಗ್ರಾಹಕರ ಅಭಿರುಚಿಗೆ ತಕ್ಕುದಾದ ಉತ್ಪನ್ನಗಳನ್ನು ತಯಾರಿಸಬೇಕೆಂದು ಹೇಳಿದರು. ಗ್ರೀನ್ ಕೇರ್ ಸಂಸ್ಥೆ ಪ್ರಧಾನ ಕಾರ್ಯದರ್ಶಿ ಜಿತೇಂದ್ರ ಕುಮಾರ ಆರ್. ಎಂ. ಸಂಸ್ಥೆಯ ಕಾರ್ಯಚಟುವಟಿಕೆಗಳ ಕುರಿತು ತಿಳಿಸಿದರು. ಸರಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಶ್ರೀಪಾದ ಹೆಗಡೆ, ಆಸ್ಮಿತೆ ಫೌಂಡೇಶನ್ ನ ರಿಯಾಜ್ ಸಾಗರ., ಗ್ರೀನ್ ಕೇರ್ ಸಂಸ್ಥೆಯ ಪದಾಧಿಕಾರಿಗಳಾದ ಜಿ.ಎಂ.ಭಟ್ಟ ಮತ್ತಿತರರು ಉಪಸ್ಥಿತರಿದ್ದರು. IMG-20240906-112321 ಇದೇ ಸಂದರ್ಭದಲ್ಲಿ ನಿವೃತ್ತ ಆರೋಗ್ಯ ಶಿಕ್ಷಣಾಧಿಕಾರಿ ಎಸ್. ಟಿ ಭಟ್ಟ ಅವರಿಗೆ ಸಂಸ್ಥೆಯ ಪರವಾಗಿ ಸನ್ಮಾನಿಸಲಾಯಿತು. IMG-20240906-112306 ಕ್ರಿಯೇಟಿವ್ ತರಬೇತಿ ಸಂಸ್ಥೆ ಯಲ್ಲಾಪುರ ಇದರ ಮುಖ್ಯಸ್ಥರಾದ ಶ್ರೀನಿವಾಸ ಮುರ್ಡೇಶ್ವರ ಸ್ವಾಗತಿಸಿದರು. ಗ್ರೀನ್ ಕೇರ್ ಸಂಸ್ಥೆಯ ನಿರ್ದೇಶಕಿ ಆಶಾ ಡಿಸೋಜಾ ನಿರೂಪಿಸಿ ವಂದಿಸಿದರು.

ಯಲ್ಲಾಪುರದಲ್ಲಿ ಮೂರು ವಾಹನಗಳ ಮಧ್ಯ ಅಪಘಾತ: 8 ಜನರಿಗೆ ಗಾಯ


ಯಲ್ಲಾಪುರ : ಸೆಪ್ಟೆಂಬರ್ 5ರ ರಾತ್ರಿ 9:20ರ ಸುಮಾರಿಗೆ ಯಲ್ಲಾಪುರ ಪಟ್ಟಣದಲ್ಲಿ ಸರಣಿ ಅಪಘಾತದಲ್ಲಿ ಒಟ್ಟು ಎಂಟು ಜನರು ಗಾಯಗೊಂಡಿದ್ದಾರೆ. ಅಪಘಾತವು ನ್ಯೂ ಮಲಬಾರ್ ಹೋಟೆಲ್ ಎದುರಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ. 

   ಹುಬ್ಬಳ್ಳಿ ನಿವಾಸಿ, 41 ವರ್ಷದ ಲಾರಿ ಚಾಲಕ ಶಿವಾಜಿ ರಾಮಚಂದ್ರ ತಂಗಡಗಿ, ತನ್ನ ಲಾರಿಯನ್ನು ಹುಬ್ಬಳ್ಳಿ ಕಡೆಯಿಂದ ಅಂಕೋಲಾ ಕಡೆಗೆ ಅತೀ ವೇಗ ಹಾಗೂ ನಿರ್ಲಕ್ಷದಿಂದ ಚಾಲನೆ ಮಾಡಿ,  ಎದುರಿನಿಂದ ಬರುತ್ತಿದ್ದ ಕಂಟೇನರ್ ಲಾರಿಗೆ ಡಿಕ್ಕಿ ಹೊಡೆದಿದ್ದಾನೆ. ಈ ಅಪಘಾತದಿಂದಾಗಿ, ಲಾರಿ ಸ್ವಲ್ಪ ಮುಂದೆ ಹೋಗಿ, ಅದೇ ದಾರಿಯಲ್ಲಿ ಬರುತ್ತಿದ್ದ ಸ್ಲೀಪರ್ ಕೋಚ್ ಬಸ್ಸಿಗೆ ಡಿಕ್ಕಿ ಹೊಡೆದು ಹೆಚ್ಚಿನ ಹಾನಿಯನ್ನುಂಟುಮಾಡಿದ್ದಾನೆ.  IMG-20240906-082002 IMG-20240906-081902 IMG-20240906-081814

   ಘಟನೆಯಲ್ಲಿ ಲಾರಿ ಚಾಲಕ ಸೇರಿದಂತೆ 7 ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಗೊಂಡವರಲ್ಲಿ ನಟೇಶ್ ವೆಂಕಟೇಶ ಮೂಡಲ ಹಿಪ್ಪೆ (29), ಆಯುಬ್ ಖಾನ್ ಅಮಿರ್ ಖಾನ್ (45), ಸಲೀಂ ಖಾದರ್ (36), ಆಶಾಲತಾ ಸುಂದರ ಶೆಟ್ಟಿ (42), ಲಕ್ಷ್ಮಿ ಕೃಷ್ಣ ಪೂಜಾರಿ (76), ಟೆಲ್ಮಾ ಎಂ ದಯಾನಂದ ಡಿಸೋಜಾ (53), ಜಯಲಕ್ಷ್ಮಿ ಆನಂದ ಪೂಜಾರಿ (54) ಸೇರಿದ್ದಾರೆ. 

   ಗಾಯಾಳುಗಳನ್ನು ತಕ್ಷಣ ತಾಲೂಕ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. 

   ಈ ಅಪಘಾತದ ಸಂಬಂಧ ಪಿಎಸ್ಐ ಸಿದ್ದಪ್ಪ ಗುಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.