


ಯಲ್ಲಾಪುರ : ಕಾಳಮ್ಮನಗರ ಕ್ರೀಡಾಂಗಣದಲ್ಲಿ ಸೆಪ್ಟೆಂಬರ್ 11ರಂದು ನಡೆದ ಆನಗೋಡು ವಲಯ ಮಟ್ಟದ ಕ್ರೀಡಾಕೂಟದಲ್ಲಿ ಯಲ್ಲಾಪುರದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆ.
ಕಾವೇರಿ ಕಂದ್ಲಿಮಠ (ಶಟಲ್ ಬ್ಯಾಡ್ಮಿಂಟನ್) , ಶ್ರೇಯಸ್ ವಿವೇಕಾನಂದ್ ಶಾನಭಾಗ್ (ಟೇಬಲ್ ಟೆನ್ನಿಸ್) ಆಟಗಳಲ್ಲಿ ತಾಲೂಕ ಮಟ್ಟದಲ್ಲಿ ಸ್ಪರ್ಧಿಸಿ ವಿಜೇತರಾಗಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.
ಪ್ರಥಮ ನಾಗೇಶ ಅಂಬಿಗ ಹಾಗೂ ಮೇಘ ಚಿದಂಬರ ಮರಾಠಿ ಇವರು ವಲಯ ಹಾಗೂ ತಾಲೂಕು ಮಟ್ಟದ (ಯೋಗ ಸ್ಪರ್ಧೆಯಲ್ಲಿ) ವಿಜೇತರಾಗಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.
ಬಿ ಗಗನ ಹಾಗೂ ರಾಜಾರಾಮ ನಾಳಕರ (ರಿದಮಿಕ್ ಯೋಗದಲ್ಲಿ) ಪ್ರಥಮ
ಎಲೀಷ ಫರ್ನಾಂಡಿಸ್ (400 ಮೀಟರ್ ಓಟ ಪ್ರಥಮ 200 ಮೀಟರ್ ಓಟ ದ್ವಿತೀಯ)
ಸಿರಿ ಭಟ್ (ಗುಂಡು ಎಸೆತ) ಪ್ರಥಮ
ಆದಿತ್ಯ ಭೋವಿವಡ್ಡರ್ (ಚಕ್ರ ಎಸೆತ) ತೃತೀಯ ಸ
ಮರ್ಥ ಹರಿಜನ (ಎತ್ತರ ಜಿಗಿತ) ತೃತೀಯ
ಶಮಾಮಾ ಸೈಯದ್ (200 ಮೀಟರ್ ಓಟ) ತೃತೀಯ,
ರಾಜಾರಾಮ್ ನಾಳ್ಕರ್ (400 ಮೀಟರ್ ಓಟ) ತೃತೀಯ
ಅಮೂಲ್ಯ ಭೋವಿವಡ್ಡರ (100 ಮೀಟರ್ ಓಟ) ತೃತೀಯ
ಶ್ರೇಯಾ ಭಟ್ (ಚೆಸ್ 5ನೇ ಸ್ಥಾನ )
ಗುಂಪು ಆಟಗಳಲ್ಲಿ ಗಂಡು ಮಕ್ಕಳ (ಕಬಡ್ಡಿಯಲ್ಲಿ ಪ್ರಥಮ) ಹಾಗೂ ಹೆಣ್ಣು ಮಕ್ಕಳು (ಕಬಡ್ಡಿಯಲ್ಲಿ ಪ್ರಥಮ)
ಹೆಣ್ಣು ಮಕ್ಕಳ (ಖೋ ಖೋ ಪಂದ್ಯದಲ್ಲಿ ಪ್ರಥಮ) ಹಾಗೂ ಗಂಡು ಮಕ್ಕಳ (ಖೋ ಖೋ ಪಂದ್ಯದಲ್ಲಿ ದ್ವಿತೀಯ) ಸ್ಥಾನ ಪಡೆದಿರುತ್ತಾರೆ.
ವಿದ್ಯಾರ್ಥಿಗಳ ಕ್ರೀಡಾ ಸಾಧನೆಗೆ ಶಾಲೆಯ ಮುಖ್ಯ ಶಿಕ್ಷಕಿ ಅನುಸೂಯಾ ಹಾರವಾಡೇಕರ, ಎಸ್ ಡಿ ಎಂ ಸಿ ಅಧ್ಯಕ್ಷ ಶಂಕರ ಗೊಂದಳಿ, ಉಪಾಧ್ಯಕ್ಷೆ ಶಶೀಕಲಾ ಅಂಬೀಗ ಹಾಗೂ ಎಲ್ಲ ಸದಸ್ಯರು, ಶಾಲೆಯ ಶಿಕ್ಷಕರಾದ ಲೂಸಿ ರೋಡ್ರಿಗೀಸ್, ನಿರ್ಮಲಾ ನಾಯಕ, ಶೋಭಾ ನಾಯಕ, ಕಮಲಾ ಭಟ್, ಜ್ಯೋತಿ ಮಿರಾಂಡಾ, ಗಣಪತಿ ಭಟ್ಟ, ಜ್ಯೋತಿ ಹಳ್ಳೇರ್, ರುಕ್ಮಿಣಿ ಪಾಲೇಕರ, ರೋಲ್ಸಿ ಲೋಭೊ, ಶ್ರುದ್ಧಾ, ರವೀನಾ, ರಾಘವೇಂದ್ರ ಪಟಗಾರ, ಲಕ್ಷ್ಮೀ ಜಿ.ಕೆ, ರೂಪಾ, ಅರ್ಚನಾ ಬಾಂದೇಕರ ಮುಂತಾದವರು ಅಭಿನಂದಿಸಿರುತ್ತಾರೆ.
ಎಲ್ಲ ಸ್ಪರ್ಧಾಳುಗಳಿಗೆ ಶಾಲಾ ಶಿಕ್ಷಕ ವೃಂದದವರೊಂದಿಗೆ ಪಾಲಕರಾದ ರಾಘವೇಂದ್ರ ತಳೇಕರ್ ಇವರು ತರಬೇತಿಯನ್ನು ನೀಡಿದ್ದರು.
.
.
.
ಯಲ್ಲಾಪುರ : ಸೆಪ್ಟೆಂಬರ್ 11ರಂದು ಯಲ್ಲಾಪುರದ ತಾಲ್ಲೂಕು ಕ್ರೀಡಾಂಗಣ ನಡೆದ ಆನಗೋಡ ವಲಯಮಟ್ಟದ ಕ್ರೀಡಾಕೂಟದಲ್ಲಿ ಆನಗೋಡ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳು ಉತ್ತಮ ಕ್ರೀಡಾ ಸಾಧನೆ ಮಾಡಿದ್ದಾರೆ.
ವಿದ್ಯಾರ್ಥಿಗಳಾದ ಭೂಮಿಕಾ ಗೌಡ (100ಮೀ ಓಟ ಪ್ರಥಮ, 200ಮೀ ಓಟ ಪ್ರಥಮ, ಉದ್ದ ಜಿಗಿತ ಪ್ರಥಮ, ರಿಲೇ ಪ್ರಥಮ ಹಾಗೂ ವೈಯಕ್ತಿಕ ವಿರಾಗ್ರಾಣಿ)
ಅಂಕಿತಾ ಭಟ್ಟ (600ಮೀ ಓಟ ಪ್ರಥಮ, ಎತ್ತರ ಜಿಗಿತ ಪ್ರಥಮ ಹಾಗೂ ರಿಲೇ ಪ್ರಥಮ)
ಶ್ರೇಯಾ ರಮಕಾಂತ್ ನಾಯ್ಕ (ಯೋಗ ದ್ವಿತೀಯ ಹಾಗೂ ರಿಲೇ ಪ್ರಥಮ)
ಸಂಜನಾ ಗೌಡ ( 200ಮೀ ಓಟ ದ್ವಿತೀಯ ಹಾಗೂ ರಿಲೇ ಪ್ರಥಮ)
ಆಕಾಶ್ ನಾಗೇಂದ್ರ ಭಟ್ಟ (ಯೋಗ ಚತುರ್ಥ)
ಬಾಲಕಿಯರ ವಾಲಿಬಾಲ್ ಪ್ರಥಮ, ಬಾಲಕರ ವಾಲಿಬಾಲ್ ದ್ವಿತೀಯ ಸ್ಥಾನವನ್ನು ಪಡೆದಿದ್ದಾರೆ. ವೈಯಕ್ತಿಕ ವಿಭಾಗದಲ್ಲಿ ಒಟ್ಟೂ 9 ಪ್ರಥಮ, 2 ದ್ವಿತೀಯ ಹಾಗೂ ಒಂದು ಚತುರ್ಥ ಸ್ಥಾನ ಹಾಗೂ ಹೆಣ್ಣು ಮಕ್ಕಳ ವೈಯಕ್ತಿಕ ವಿರಾಗ್ರಣಿ
ಗುಂಪು ಆಟದಲ್ಲಿ ಒಂದು ಪ್ರಥಮ ಮತ್ತು ಒಂದು ದ್ವಿತೀಯ ಸ್ಥಾನ ಪಡೆದಿದ್ದಾರೆ.
ಇವರಿಗೆ ಶಾಲೆಯ ಎಸ್.ಡಿ.ಎಂ. ಸಿ ಅಧ್ಯಕ್ಷ ನಾಗೇಂದ್ರಭಟ್ಟ ಹಾಗೂ ಸದಸ್ಯರು, ಶಾಲೆಯ ಮುಖ್ಯ ಶಿಕ್ಷಕಿ ಸವೀತಾ ಹೆಗಡೆ ಶಿಕ್ಷಕರಾದ ಪ್ರತಿಭಾ ನಾಯ್ಕ, ಮಾರುತಿ ಆಚಾರಿ, ಸೌಮ್ಯಶ್ರೀ ಹಾನಗಲ್ ಹಾಗೂ ಪಾಲಕರು ಅಭಿನಂದನೆ ಸಲ್ಲಿಸಿದ್ದಾರೆ.
.
.
.
ಯಲ್ಲಾಪುರ : ಪಟ್ಟಣದ ಮಂಜುನಾಥನಗರದಲ್ಲಿರುವ ಕಾರ್ಮಿಕ ಭವನದಲ್ಲಿ 9ನೇ ವರ್ಷದ ಶ್ರಾವಣ ಯಕ್ಷ ಸಂಭ್ರಮ ಕಾರ್ಯಕ್ರಮ ಸೆ.15 ರಂದು ಸಂಜೆ 6 ರಿಂದ ನಡೆಯಲಿದೆ.
ಈ ಬಾರಿ 'ದ್ರುಪದ ಗರ್ವಭಂಗ', 'ಯೋಗಿನಿ ಕಲ್ಯಾಣ' ಹಾಗೂ 'ವೀರ ವೃಷಸೇನ' ಎಂಬ ಅಪರೂಪದ ಪೌರಾಣಿಕ ಯಕ್ಷಗಾನ ಪ್ರಸಂಗಗಳು ಪ್ರದರ್ಶನಗೊಳ್ಳಲಿವೆ. ಸುಬ್ಬಣ್ಣ ಕಂಚಗಲ್, ರಾಘವೇಂದ್ರ ಬೆಳಸೂರು, ಎಂ.ಆರ್.ವಡ್ರಮನೆ ಅವರ ಸಂಯೋಜನೆಯಲ್ಲಿ, ಯಕ್ಷ ರಾಘವ ಜನ್ಸಾಲೆ ಪ್ರತಿಷ್ಠಾನದ ಸಹಯೋಗದಲ್ಲಿ ಕಾರ್ಯಕ್ರಮ ಆಯೋಜನೆಗೊಂಡಿದೆ. ದಕ್ಷಿಣೋತ್ತರ ಕನ್ನಡ ಜಿಲ್ಲೆಯ ಪ್ರಸಿದ್ಧ ಕಲಾವಿದರು, ಸ್ಥಳೀಯ ಕಲಾವಿದರು ಸೇರಿ 35 ಕ್ಕೂ ಹೆಚ್ಚು ಕಲಾವಿದರು ಭಾಗವಹಿಸಲಿದ್ದಾರೆ.
ಪ್ರತಿ ವರ್ಷವೂ ಈ ಕಾರ್ಯಕ್ರಮದಲ್ಲಿ ಯಕ್ಷಗಾನದ ಸಾಧಕರನ್ನು ಗುರುತಿಸಿ ಗೌರವಿಸುವ ಕಾರ್ಯ ಮಾಡಲಾಗುತ್ತಿದ್ದು, ಈ ಬಾರಿ ಯಕ್ಷಗಾನ ಪ್ರದರ್ಶನಗಳಿಗೆ ವೇಷಭೂಷಣ ಒದಗಿಸುವ ಕವಾಳೆ ಸಹೋದರರನ್ನು ಸನ್ಮಾನಿಸಲಾಗುತ್ತಿದೆ. ಕಳೆದ 22 ವರ್ಷಗಳಿಂದ ಸುತ್ತಮುತ್ತಲಿನ ಯಕ್ಷಗಾನಗಳಿಗೆ ವೇಷಭೂಷಣ ನೀಡುತ್ತಿರುವ ಕೇಶವ ಭಾಗ್ವತ ಹಾಗೂ ವಿನಾಯಕ ಭಾಗ್ವತ ಅವರಿಗೆ ಈ ವರ್ಷದ ಶ್ರಾವಣ ಸಂಭ್ರಮ ಗೌರವ ಸನ್ಮಾನ ಮಾಡಲಾಗುತ್ತಿದೆ.
ಕಳೆದ 9 ವರ್ಷಗಳಿಂದ ಸುಬ್ಬಣ್ಣ ಕಂಚಗಲ್ ನೇತೃತ್ವದಲ್ಲಿ ಅನೇಕ ಸಂಘಟಕರು, ಕಲಾಭಿಮಾನಿಗಳ ಸಹಕಾರದೊಂದಿಗೆ ಶ್ರಾವಣ ಯಕ್ಷ ಸಂಭ್ರಮ ಕಾರ್ಯಕ್ರಮ ನಡೆಯುತ್ತಿದೆ. ಪ್ರತಿ ವರ್ಷ ವಿಶೇಷ ಸಂಯೋಜನೆ, ಅಪರೂಪದ ಪ್ರಸಂಗಗಳು ಮೂಲಕ ಶ್ರಾವಣ ಸಂಭ್ರಮದ ಸಂಘಟನೆ ಜಿಲ್ಲೆಯಲ್ಲಿ ಹೆಸರು ಗಳಿಸಿದೆ.
ಯಲ್ಲಾಪುರ: ಸೆಪ್ಟೆಂಬರ್ 15 ರಂದು ಪ್ರಪಂಚದಾದ್ಯಂತ ಪ್ರಜಾಪ್ರಭುತ್ವ ದಿನಾಚರಣೆ ಆಚರಿಸಲಾಗುತ್ತದೆ. ಈ ದಿನವು ಜನಸಾಮಾನ್ಯರ ಅಧಿಕಾರವನ್ನು ಸ್ಮರಿಸುವ ಮತ್ತು ಪ್ರಜಾಪ್ರಭುತ್ವದ ಮೌಲ್ಯಗಳನ್ನು ಬಲಪಡಿಸುವ ದಿನವಾಗಿದೆ.
ಭಾರತದಲ್ಲಿ, 1950 ರಲ್ಲಿ ಅಂಗೀಕರಿಸಲ್ಪಟ್ಟ ಸಂವಿಧಾನವು ಜನರಿಗೆ ಸ್ವತಂತ್ರತೆ, ಸಮಾನತೆ ಮತ್ತು ನ್ಯಾಯದ ಅಧಿಕಾರವನ್ನು ನೀಡಿದೆ. ಇದು ನಮ್ಮ ದೇಶದ ಪ್ರಜಾಪ್ರಭುತ್ವದ ಆಧಾರಸ್ತಂಭವಾಗಿದೆ.
ಕರ್ನಾಟಕದಲ್ಲಿ, ಪ್ರಜಾಪ್ರಭುತ್ವ ದಿನಾಚರಣೆಯನ್ನು ವಿವಿಧ ರೀತಿಯಲ್ಲಿ ಆಚರಿಸಲಾಗುತ್ತದೆ. ಶಾಲೆಗಳು ಮತ್ತು ಕಾಲೇಜುಗಳು ಪ್ರಬಂಧ ಸ್ಪರ್ಧೆಗಳು, ಚರ್ಚಾ ಕಾರ್ಯಕ್ರಮಗಳು, ಮತ್ತು ಪ್ರದರ್ಶನಗಳನ್ನು ಆಯೋಜಿಸುತ್ತವೆ. ಸರ್ಕಾರಿ ಕಚೇರಿಗಳು ಮತ್ತು ಸಂಘ ಸಂಸ್ಥೆಗಳು ಸಹ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಿ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಪ್ರತಿಪಾದಿಸುತ್ತವೆ.
ರಾಜ್ಯದಲ್ಲಿ ಈ ಮಾನವ ಸರಪಳಿಯು ಸುಮಾರು 2500 ಕಿಲೋಮೀಟರ್ ಉದ್ದ ಇರಲಿದ್ದು ಜಗತ್ತಿನ ಅತಿ ಉದ್ದದ ಮಾನವ ಸರಪಳಿ ಆಗಲಿದೆ. ಇದರಲ್ಲಿ ಸುಮಾರು 25 ಲಕ್ಷಕ್ಕೂ ಹೆಚ್ಚಿನ ಜನರು ಭಾಗವಹಿಸುವ ನಿರೀಕ್ಷೆ ಇದ್ದು, ಪ್ರತಿ ಕಿಲೋಮೀಟರ್ಗೆ 700 ರಿಂದ 1000 ಜನರು ಇರಲಿದ್ದಾರೆ. ಈ ಮಾನವ ಸರಪಳಿ ಕಾರ್ಯಕ್ರಮದಲ್ಲಿ ಜನರ ಮೂಲಭೂತ ಹಕ್ಕು ಮತ್ತು ಕರ್ತವ್ಯಗಳ ಕುರಿತು ಸಂದೇಶವನ್ನು ಬಿತ್ತರಿಸುವುದು ಮಾತ್ರವಲ್ಲದೇ, ಸರ್ಕಾರದ ಬಗೆಗಿನ ಜನರ ಭಾವನೆಯನ್ನು ಸಂಗ್ರಹಿಸಿ ಬಿತ್ತರಿಸಲಾಗುತ್ತದೆ.
ವಿಶ್ವಸಂಸ್ಥೆಯು 2007 ರ ಸೆ.15 ರಂದು ಪ್ರಜಾಪ್ರಭುತ್ವ ದಿನವನ್ನು ಆಚರಿಸುವ ಕುರಿತು ಘೋಷಣೆ ಹೊರಡಿಸಿದ್ದು, ಅಂದು ಜಗತ್ತಿನಾದ್ಯಂತ ವಿಶ್ವ ಪ್ರಜಾಪ್ರಭುತ್ವ ದಿನವನ್ನಾಗಿ ಆಚರಿಸಲಾಗುತ್ತಿದೆ. ಈ ದಿನವು ವಿಶ್ವ ಮಟ್ಟದಲ್ಲಿ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಪಸರಿಸುವ ವೇದಿಕೆಯಾಗಿದ್ದು, ರಾಜ್ಯದಲ್ಲಿ ಸೆ.15 ರಂದು ನಡೆಯುವ ಮಾನವ ಸರಪಳಿ ಕಾರ್ಯಕ್ರಮದಲ್ಲಿ ಪ್ರತಿಯೊಬ್ಬರೂ ಭಾಗವಹಿಸಿ, ಪ್ರಜಾಪ್ರಭುತ್ವದ ಮೌಲ್ಯಗಳಾದ ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವದ ಸಂದೇಶವನ್ನು ಇಡೀ ಜಗತ್ತಿಗೆ ಸಾರಬೇಕಿದೆ.
ಉತ್ತರ ಕನ್ನಡ ಜಿಲ್ಲೆಯಲ್ಲಿ ?
ಉತ್ತರ ಕನ್ನಡ ಜಿಲ್ಲೆಯಲ್ಲಿ, ಈ ದಿನವನ್ನು ವಿಶೇಷ ರೀತಿಯಲ್ಲಿ ಆಚರಿಸಲಾಗುತ್ತದೆ. ಜಿಲ್ಲಾಡಳಿತವು ಜನಸಾಮಾನ್ಯರಿಗೆ ಪ್ರಜಾಪ್ರಭುತ್ವದ ಬಗ್ಗೆ ತಿಳುವಳಿಕೆ ಮೂಡಿಸುವ ಉದ್ದೇಶದಿಂದ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸುತ್ತದೆ. ಜಿಲ್ಲೆಯ ವಿವಿಧ ಶಾಲೆಗಳು ಮತ್ತು ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಪ್ರಜಾಪ್ರಭುತ್ವದ ಬಗ್ಗೆ ತಿಳಿಸುವ ಉದ್ದೇಶದಿಂದ ಪ್ರಬಂಧ ಸ್ಪರ್ಧೆಗಳು, ಚರ್ಚಾ ಕಾರ್ಯಕ್ರಮಗಳು, ಮತ್ತು ಪ್ರದರ್ಶನಗಳನ್ನು ನಡೆಸಲಾಗುತ್ತದೆ.
ಉತ್ತರ ಕನ್ನಡ ಜಿಲ್ಲೆಯಲ್ಲಿ ನಡೆಯುವ ಈ ಮಾನವ ಸರಪಳಿ ಕಾರ್ಯಕ್ರಮವು ಧಾರವಾಡ ಜಿಲ್ಲೆಯಿಂದ ಜಿಲ್ಲೆಗೆ ಮುಂದುವರೆಯಲಿದ್ದು, ಹಳಿಯಾಳ ತಾಲೂಕಿನ ಮಾವಿನಕೊಪ್ಪದಿಂದ ಭಟ್ಕಳ ತಾಲೂಕಿನ ಗೊರಟೆಯವರೆಗೆ ಒಟ್ಟು 260 ಕಿಮೀ ದೂರದಲ್ಲಿ ದಟ್ಟವಾದ ಅರಣ್ಯ ಪ್ರದೇಶ ಹಾಗೂ ಅಪಾಯಕಾರಿ ಗುಡ್ಡ ಕುಸಿತ ಪ್ರದೇಶಗಳನ್ನು ಹೊರತುಪಡಿಸಿ ಉಳಿದ ಒಟ್ಟು 114 ಕಿಮೀ ಉದ್ದದ ಮಾನವ ಸರಪಳಿ ರಚಿಸಲು ಎಲ್ಲಾ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ.
ಈ ಮಾನವ ಸರಪಳಿಯ ಪ್ರತೀ ಕಿಮೀ ಗೆ 700 ರಿಂದ 800 ಜನ ಭಾಗವಹಿಸಲಿದ್ದು, ಜಿಲ್ಲೆಯಲ್ಲಿ ಸುಮಾರು 80,000 ಕ್ಕೂ ಅಧಿಕ ಮಂದಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದು, ಹಳಿಯಾಳ ಚೆಕ್ ಪೋಸ್ಟ್, ಕೆರೊಳ್ಳಿ ಕ್ರಾಸ್, ಸಾಂಬ್ರಾಣಿ, ಯಲ್ಲಾಪುರ ನಗರ, ಶಿರಸಿ ನಗರ, ದೀವಗಿ ಕ್ರಾಸ್, ದೇವಗಿರಿ, ಅನಂತವಾಡಿಗಳಲ್ಲಿ ರಚಿಸಲಾಗುವ ಮಾನವ ಸರಪಳಿಯಲ್ಲಿ ಜಿಲ್ಲೆಯ ಜನಪ್ರತಿನಿಧಿಗಳು, ಶಾಲಾ ಕಾಲೇಜು ವಿದ್ಯಾರ್ಥಿಗಳು, ಸಾರ್ವಜನಿಕರು, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಮತ್ತು ಸದಸ್ಯರು, ಸರ್ಕಾರಿ ನೌಕರರು ಮತ್ತು ಅಧಿಕಾರಿಗಳು ಈ ವಿನೂತನ ದಾಖಲೆ ನಿರ್ಮಾಣದ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ಪ್ರಜಾಪ್ರಭುತ್ವ ದಿನಾಚರಣೆ, ಸೆಪ್ಟೆಂಬರ್ 15 ರಂದು ಆಚರಿಸಲಾಗುವುದು ಏಕೆ?
ಸೆಪ್ಟೆಂಬರ್ 15 ರಂದು ಪ್ರಜಾಪ್ರಭುತ್ವ ದಿನಾಚರಣೆ ಆಚರಿಸಲಾಗುವುದು ಏಕೆಂದರೆ 1945 ರಲ್ಲಿ ಈ ದಿನದಂದು ಯುರೋಪಿನಲ್ಲಿ ಯುದ್ಧದ ನಂತರದ ಮೊದಲ ಸ್ವತಂತ್ರ ಮತ್ತು ಪ್ರಜಾಪ್ರಭುತ್ವದ ಚುನಾವಣೆಗಳು ನಡೆದವು. ಈ ಚುನಾವಣೆಗಳನ್ನು ಸುಗ್ರೀವಾಜ್ಞೆಯಿಂದ ಆಡಳಿತ ಮಾಡುತ್ತಿದ್ದ ನಾಜಿ ಪಕ್ಷದಿಂದ ಮುಕ್ತಗೊಂಡು ಡೆಮೋಕ್ರಟಿಕ್ ರಾಷ್ಟ್ರಗಳನ್ನು ನಿರ್ಮಿಸಲು ಒಂದು ಪ್ರಮುಖ ಹೆಜ್ಜೆಯಾಗಿ ಪರಿಗಣಿಸಲಾಯಿತು. ಈ ಚುನಾವಣೆಗಳು ಪ್ರಜಾಪ್ರಭುತ್ವದ ಪ್ರಾಮುಖ್ಯತೆ ಮತ್ತು ಜನಸಾಮಾನ್ಯರಿಗೆ ಅಧಿಕಾರ ನೀಡುವುದರ ಪ್ರಾಮುಖ್ಯತೆಯನ್ನು ಸಾಬೀತುಪಡಿಸಿದವು.
ಪ್ರಜಾಪ್ರಭುತ್ವ ದಿನಾಚರಣೆ, ಸೆಪ್ಟೆಂಬರ್ 15. ಮೂಲಭೂತ ಉದ್ದೇಶವೇನು?
ಪ್ರಜಾಪ್ರಭುತ್ವ ದಿನಾಚರಣೆಯ ಮೂಲಭೂತ ಉದ್ದೇಶವೆಂದರೆ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಸ್ಮರಿಸುವುದು, ಜನಸಾಮಾನ್ಯರ ಅಧಿಕಾರವನ್ನು ಬಲಪಡಿಸುವುದು ಮತ್ತು ಪ್ರಜಾಪ್ರಭುತ್ವದ ಮಹತ್ವವನ್ನು ಜನರಿಗೆ ಅರಿವು ಮೂಡಿಸುವುದು. ಈ ದಿನವು ಜನಸಾಮಾನ್ಯರು ಪ್ರಜಾಪ್ರಭುತ್ವದ ಪ್ರಯೋಜನಗಳನ್ನು ಆನಂದಿಸಲು ತಮ್ಮ ಅಧಿಕಾರಗಳನ್ನು ಬಳಸಿಕೊಳ್ಳಬೇಕು ಎಂಬ ಸಂದೇಶವನ್ನು ನೀಡುತ್ತದೆ.
ಪ್ರಜಾಪ್ರಭುತ್ವದ ಮಹತ್ವ ಏನು?
ಪ್ರಜಾಪ್ರಭುತ್ವವು ಸಮಾಜಕ್ಕೆ ಅನೇಕ ಪ್ರಯೋಜನಗಳನ್ನು ನೀಡುತ್ತದೆ. ಇದು ಸ್ವಾತಂತ್ರ್ಯ, ಸಮಾನತೆ, ನ್ಯಾಯ ಮತ್ತು ಜನಸಾಮಾನ್ಯರ ಅಧಿಕಾರವನ್ನು ಖಾತರಿಪಡಿಸುತ್ತದೆ.
ಸ್ವಾತಂತ್ರ್ಯ:
ಪ್ರಜಾಪ್ರಭುತ್ವದಲ್ಲಿ ಜನರಿಗೆ ಅಭಿವ್ಯಕ್ತಿ ಸ್ವಾತಂತ್ರ್ಯ, ಧಾರ್ಮಿಕ ಸ್ವಾತಂತ್ರ್ಯ, ಮತ್ತು ಸಂಘಟನೆಯ ಸ್ವಾತಂತ್ರ್ಯ ಇರುತ್ತದೆ. ಅವರು ತಮ್ಮ ಆಲೋಚನೆಗಳನ್ನು ಮುಕ್ತವಾಗಿ ವ್ಯಕ್ತಪಡಿಸಬಹುದು ಮತ್ತು ಭಿನ್ನಾಭಿಪ್ರಾಯವನ್ನು ಹೊಂದಿರಬಹುದು.
ಸಮಾನತೆ:
ಪ್ರಜಾಪ್ರಭುತ್ವವು ಎಲ್ಲಾ ಜನರಿಗೆ ಸಮಾನತೆಯನ್ನು ಖಾತರಿಪಡಿಸುತ್ತದೆ. ಜಾತಿ, ಧರ್ಮ, ಲಿಂಗ, ಅಥವಾ ಸಾಮಾಜಿಕ ಸ್ಥಾನಮಾನದ ಆಧಾರದ ಮೇಲೆ ಯಾವುದೇ ವ್ಯತ್ಯಾಸವಿರುವುದಿಲ್ಲ. ಎಲ್ಲರಿಗೂ ಸಮಾನ ಅವಕಾಶಗಳು ಮತ್ತು ಅಧಿಕಾರಗಳು ಲಭ್ಯವಿರುತ್ತವೆ.
ನ್ಯಾಯ:
ಪ್ರಜಾಪ್ರಭುತ್ವವು ನಿಯಮಗಳ ಆಳ್ವಿಕೆಯನ್ನು ಪ್ರೋತ್ಸಾಹಿಸುತ್ತದೆ ಮತ್ತು ಎಲ್ಲಾ ಜನರಿಗೆ ನ್ಯಾಯವನ್ನು ಖಾತರಿಪಡಿಸುತ್ತದೆ. ಪ್ರತಿಯೊಬ್ಬರಿಗೂ ನ್ಯಾಯಾಂಗಕ್ಕೆ ಪ್ರವೇಶ ಮತ್ತು ತಮ್ಮ ಹಕ್ಕುಗಳನ್ನು ಸಮರ್ಥಿಸಿಕೊಳ್ಳಲು ಅವಕಾಶ ಲಭ್ಯವಿರುತ್ತದೆ.
ಜನಸಾಮಾನ್ಯರ ಅಧಿಕಾರ:
ಪ್ರಜಾಪ್ರಭುತ್ವದಲ್ಲಿ ಜನಸಾಮಾನ್ಯರು ಸರ್ಕಾರವನ್ನು ಆಯ್ಕೆ ಮಾಡುವ ಅಧಿಕಾರವನ್ನು ಹೊಂದಿರುತ್ತಾರೆ. ಅವರು ತಮ್ಮ ನಿಯೋಗಿಗಳನ್ನು ಆಯ್ಕೆ ಮಾಡಬಹುದು ಮತ್ತು ಸರ್ಕಾರದ ಕಾರ್ಯಕ್ಷಮತೆಯ ಬಗ್ಗೆ ಪ್ರಶ್ನಿಸಬಹುದು.
ಪ್ರಜಾಪ್ರಭುತ್ವವು ಜನರಿಗೆ ಅತ್ಯಂತ ಉತ್ತಮ ಆಡಳಿತ ಪದ್ಧತಿಯಾಗಿದೆ. ಏಕೆಂದರೆ ಇದು ಜನರಿಗೆ ಸ್ವಾತಂತ್ರ್ಯ, ಸಮಾನತೆ, ನ್ಯಾಯ ಮತ್ತು ಅಧಿಕಾರವನ್ನು ಖಾತರಿಪಡಿಸುತ್ತದೆ. ಪ್ರಜಾಪ್ರಭುತ್ವದ ಮೌಲ್ಯಗಳನ್ನು ಸ್ಮರಿಸುವ ಮತ್ತು ಬಲಪಡಿಸುವುದು ನಮ್ಮ ಎಲ್ಲರ ಜವಾಬ್ದಾರಿಯಾಗಿದೆ.
.
.
.