Adv

news21 ‌ ‌YELLAPURNews prakatane --------- ‌ kumar Oct9to15 ‌ ‌ ‌ ‌ IMG-20241009-195526

Wednesday, 24 July 2024

ಮಳೆಯ ಭಯಾನಕ ವಾತಾವರಣದ ನಂತರ ಗಾಳಿಯ ಅವಾಂತರಗಳ ಸೃಷ್ಟಿ, ಬಸ್ ನಿಲ್ದಾಣದಲ್ಲಿ ಹಾರಿ ಹೋದ ಶೀಟ್ ಗಳು

ಯಲ್ಲಾಪುರ ; ಯಲ್ಲಾಪುರ ಪಟ್ಟಣ ಹಾಗೂ ಗ್ರಾಮೀಣ ವ್ಯಾಪ್ತಿಯಲ್ಲಿ ಕಳೆದ ಒಂದು ವಾರದಿಂದ ಸುರಿಯುತ್ತಿರುವ ಭಾರಿ ಮಳೆ ನಂತರ ಗಾಳಿ ಕೆಟ್ಟ ಪ್ರಭಾವ ಬೀರಿದ್ದು, ಮಳೆಯಲ್ಲಿ ಮುರಿದು ಬೀಳುವ ಮರಗಳು, ಹಾರಿಹೋಗದ ತಗಡುಗಳು ಇದೀಗ ಗಂಭೀರ ಸ್ಥಿತಿ ನಿರ್ಮಾಣವಾಗಿದೆ.
  ಜಿಲ್ಲೆಗೆ ಹೋಲಿಸದರೇ, ಯಲ್ಲಾಪುರ ತಾಲೂಕಿನಲ್ಲಿ ಮಳೆ ಅಷ್ಟೇನೂ ಅವಾಂತರ ಸೃಷ್ಟಿಸಿದೆ ಇದ್ದರು, ಕಳೆದ ಎರಡು ದಿನಗಳಿಂದ ಬೀಸುವ ಭಾರಿ ಗಾಳಿಯಿಂದಾಗಿ ಬಹಳಷ್ಟು ಅವಾಂತರಗಳು ಸೃಷ್ಟಿಯಾಗಿದೆ. ಓರ್ವ ವ್ಯಕ್ತಿಯ ಜೀವ ಕೂಡ ಹೋಗಿದೆ. ಪಟ್ಟಣದ ಬಸ್ ನಿಲ್ದಾಣದಲ್ಲಿ ಅಳವಡಿಸಲಾದ ತಗಡುಗಳು ಗಾಳಿಯಿಂದಾಗಿ ಹಾರಿ ಹೋಗಿದ್ದು ಸದೃಢವಾದ ಬೇಸ್ ಇರುವ ತಗಡುಗಳ ಹಾರಿ ಹೋಗಿದ್ದ ಪರಿಣಾಮ ಇನ್ನಿತರ ಜಾಗಗಳಲ್ಲಿ ಎಷ್ಟೊಂದು ಪರಿಣಾಮ ಬೀರಿರಬಹುದು ಎಂದು ಊಹಿಸಬಹುದಾಗಿದೆ. ಸುದೈವವಶಾತಃ ಈ ತಗಡುಗಳು ಪ್ರಯಾಣಿಕರ ಮೇಲೆ ಬೀಳದೆ ಇರುವ ಕಾರಣಕ್ಕೆ ಯಾವುದೇ ಅವಘಡ ಸಂಭವಿಸಿಲ್ಲ
   ಪಟ್ಟಣ ವ್ಯಾಪ್ತಿಯಲ್ಲಿ ಯಾರೂ ಕೂಡ ಚತ್ರಿ ಹಿಡಿದು ನಡೆದಾಡುವ ಪರಿಸ್ಥಿತಿಯಲ್ಲಿಲ್ಲ. ಯಾಕೆಂದರೆ ಚತ್ರಿ ಮಳೆಯ ನೀರು ತಡೆಯುವ ಬದಲು ಅದನ್ನು ದುರಸ್ತಿ ಮಾಡುವ ಕಡೆಗೆ ನೆನೆಸಿಕೊಂಡು ಓಡಾಡುವ ಮಾಲಿಕರಿಗೆ ಸಮಸ್ಯೆಯಾಗಿದೆ.  
 ಇದೀಗ ಸಾಮಾನ್ಯವಾಗಿ ಮಳೆ ಸುರಿಯುತ್ತಿದ್ದರು ಪ್ರಕೃತಿ ಗಾಳಿಯ ಮೂಲಕ ತಾಲೂಕಿನಲ್ಲಿ ವಿಪರ್ಯಾಸ ಪರಿಣಾಮಗಳನ್ನು ತೋರಿಸುತ್ತಿದೆ.