ಯಲ್ಲಾಪುರ: ಬಿಸಗೋಡ ಸರ್ಕಾರಿ ಪ್ರೌಢಶಾಲೆಯಲ್ಲಿ ಗುರುವಾರ ಶಾಲಾ ಸಂಸತ್ತನ್ನು ಉದ್ಘಾಟಿಸಿ, ಟಿಎಂಎಸ್ ಅಧ್ಯಕ್ಷ ನಾರಾಯಣ ಭಟ್ ಅಗ್ಗಾಶಿಕುಂಬ್ರಿ ಮಾತನಾಡಿದರು.
ಅವರು, ಶಾಲಾ ಸಂಸತ್ತಿನ ಮೂಲಕ ಯುವಜನಾಂಗದಲ್ಲಿ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಬೆಳೆಸಿ, ಪ್ರಜ್ಞಾವಂತ ಮತದಾರರನ್ನು ನಿರ್ಮಾಣ ಮಾಡುವುದು ಪ್ರಮುಖವಾಗಿದೆ ಎಂದು ಹೇಳಿದರು. ವಿದ್ಯಾರ್ಥಿಗಳು ಶಿಕ್ಷಣದ ಮೌಲ್ಯಗಳ ಜೊತೆಗೆ ಜೀವನ ಶಿಕ್ಷಣವನ್ನು ಪಡೆಯುವುದು ಅನಿವಾರ್ಯತೆಯಾಗಿದೆ. ಪ್ರಬುದ್ಧ ಸಮಾಜ ನಿರ್ಮಾಣಕ್ಕೆ ಶಾಲಾ ಸಂಸತ್ತು ಸಹಕಾರಿಯಾಗಬೇಕು ಎಂದು ಕರೆ ನೀಡಿದರು.
ನಂತರ ನಡೆದ ಸಂವಾದದಲ್ಲಿ ವಿದ್ಯಾರ್ಥಿಗಳು ಸಹಕಾರ ಕ್ಷೇತ್ರ, ಕೃಷಿ ಬೆಳವಣಿಗೆ, ಬಹುಪಕ್ಷ ಪದ್ಧತಿ, ವಿಭಕ್ತ ಕುಟುಂಬ ಪದ್ಧತಿ, ಪ್ರತಿಭಾ ಪಲಾಯನ ಮುಂತಾದ ವಿಷಯಗಳ ಕುರಿತು ಸಂವಾದ ನಡೆಸಿ ಮಾಹಿತಿ ಪಡೆದರು.
ಶಾಲೆಯ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಧನುಷ್ ಕೆಎಂ ಮಾತನಾಡಿದರು. ಸಭೆಯ ಅಧ್ಯಕ್ಷತೆಯನ್ನು ಗಣಪತಿ ಭಟ್ ವಹಿಸಿದ್ದರು. ದೈಹಿಕ ಶಿಕ್ಷಣ ಶಿಕ್ಷಕರಾದ ವಿನೋದ ನಾಯಕ ಪ್ರಮಾಣವಚನ ಬೋಧಿಸಿದರು.
ಶಾಲೆಯ ಮುಖ್ಯೋಪಾಧ್ಯಾಯ ಎಂ ಆರ್ ನಾಯಕ, ಶಿಕ್ಷಕರುಗಳಾದ ಶಾಲಿನಿ ನಾಯಕ, ಶ್ರೀಧರ ಹೆಗಡೆ, ಶೈಲಾ ಭಟ್ಟ, ವಿ ಎಂ ಭಟ್, ಸದಾನಂದ ದಬಗಾರ, ರವಿಕುಮಾರ ಕೆ.ಎನ್, ನಾಗರಾಜ್ ಹೆಗಡೆ ಉಪಸ್ಥಿತರಿದ್ದರು.
ಜುಲೈ 13ರಂದು ಯಲ್ಲಾಪುರ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ವಾರ್ಷಿಕೋತ್ಸವ ಸಮಾರಂಭ
ಯಲ್ಲಾಪುರ ; ಕಾಲೇಜು ಶಿಕ್ಷಣ ಇಲಾಖೆ, ಯಲ್ಲಾಪುರ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರ ಆಶ್ರಯದಲ್ಲಿ ಜುಲೈ 13ರ ಬೆಳಿಗ್ಗೆ 10.00 ಗಂಟೆಗೆ 'ಕಾಲೇಜು ವಾರ್ಷಿಕೋತ್ಸವ' ಕಾರ್ಯಕ್ರಮ ನಡೆಯಲಿದೆ ಎಂದು ಪ್ರಾಂಶುಪಾಲರಾದ ಡಾ. ಆರ್.ಡಿ. ಜನಾರ್ಧನ್ ತಿಳಿಸಿದ್ದಾರೆ.