Adv

news21 ‌ ‌YELLAPURNews prakatane --------- ‌ kumar Oct9to15 ‌ ‌ ‌ ‌ IMG-20241009-195526

Sunday, 21 July 2024

ಶಿರೂರು ಗುಡ್ಡ ಕುಸಿತ‌ ಸ್ಥಳಕ್ಕೆ ಯಲ್ಲಾಪುರ ಮೂಲಕ ಮಿಲಿಟರಿ ರವಾನೆ

ಯಲ್ಲಾಪುರ ; ಕಳೆದ ಬುಧವಾರ  ರಾಷ್ಟ್ರೀಯ ಹೆದ್ದಾರಿ ಅಂಕೋಲ ತಾಲೂಕಿನ ಶಿರೂರು ಬಳಿ ಗುಡ್ಡ ಕುಸಿತವಾಗಿ ಹಲವಾರು ಜನ ಸಾವನ್ನಪ್ಪಿ ಇನ್ನೂ ಹಲವಾರು ಜನ ಕಾಣೆಯಾಗಿದ್ದರು. ಕಾಣೆಯಾದವರ ಪತ್ತೆಗಾಗಿ ಜಿಲ್ಲಾಡಳಿತ ಹಾಗೂ ಸರ್ಕಾರ ಸೈನಿಕರ ನೆರವು ಪಡೆದಿದ್ದು, ಬೆಳಗಾವಿಯ ಮಿಲಿಟರಿ ಪೋರ್ಸ್‌ನ ಅರವತ್ತು ಜನ ಸೈನಿಕರು ಹಾಗೂ ಅಧಿಕಾರಿಗಳು ರವಿವಾರ ಮಧ್ಯಾಹ್ನ ಯಲ್ಲಾಪುರ ಮೂಲಕ ಶಿರೂರ್ ಗುಡ್ಡ ಕುಸಿತವಾದ ಸ್ಥಳಕ್ಕೆ ತೆರಳಿದರು.
   60 ಜನ ಸೈನಿಕರು, ತೆರವು ಕಾರ್ಯಕ್ಕೆ ಅಗತ್ಯ ಇರುವ ಸಾಮಗ್ರಿಗಳೊಂದಿಗೆ ಒಟ್ಟು ಆರು ವಾಹನ ಎರಡು ಅಧಿಕಾರಿಗಳ ಚೀಪ್ ಳೊಂದಿಗೆ ತೆರಳಿದ್ದಾರೆ.
   ಅದಕ್ಕೂ ಮುನ್ನ ಯಲ್ಲಾಪುರ ಪಟ್ಟಣದ ತಹಶೀಲ್ದಾರ್ ಕಚೇರಿ ಎದರು ತಹಶೀಲ್ದಾರ್ ಅಶೋಕ್ ಭಟ್ ಸೈನಿಕರನ್ನು ಬರಮಾಡಿಕೊಂಡು ಉಪಹಾರದ ವ್ಯವಸ್ಥೆ ಮಾಡಿ ನಂತರ ಬೀಳ್ಕೊಟ್ಟರು.