Adv

news21 ‌ ‌YELLAPURNews prakatane --------- ‌ kumar Oct9to15 ‌ ‌ ‌ ‌ IMG-20241009-195526

Saturday, 13 July 2024

ಮಚ್ಚಿಗಲ್ಲಿ ಶಾಲೆಯ ಹಿಂದೆ ಗಾಂಜಾ ಸೇವಿಸುತಿದ್ದ ಯುವಕನ ಬಂಧನ

ಯಲ್ಲಾಪುರ : ಪಟ್ಟಣದ ಮಚ್ಚಿಗಲ್ಲಿಯ ಶಾಲೆಯ ಹಿಂದೆ ಸಾರ್ವಜನಿಕ ಸ್ಥಳದಲ್ಲಿ ಗಾಂಜಾ ಸೇವನೆ ಮಾಡುತ್ತಿದ್ದ 20 ವರ್ಷದ ಯುವಕನ ವಿರುದ್ಧ ಪೊಲೀಸರು ಕಾನೂನು ಕ್ರಮ ಕೈಗೊಂಡಿದ್ದಾರೆ.
 
 ಪಿಎಸ್ಐ ನಿರಂಜನ ಹೆಗಡೆ ಅವರು ಯುವಕನ ವಿರುದ್ಧ ಜುಲೈ  12 ರಂದು ಠಾಣೆಗೆ ದೂರು ನೀಡಿದ್ದಾರೆ. ದೂರಿನಲ್ಲಿ ತಿಳಿಸಿರುವಂತೆ, ಆರೋಪಿ ಕಾರ್ತಿಕ ಚಂದ್ರು ಸಿದ್ದಿ(20) ಯುವಕ ಜುಲೈ 12ರಂದು 11:30 ಗಂಟೆಯ ಸುಮಾರಿಗೆ ಯಲ್ಲಾಪುರ ಪಟ್ಟಣದ ಮಚ್ಚಿಗಲ್ಲಿಯಲ್ಲಿರುವ ಕೆಜಿಎಸ್ ಶಾಲೆಯ ಹಿಂಬದಿಯ ಕಟ್ಟಡದ ಹಿಂದೆ ಗಾಂಜಾ ಸೇವನೆ ಮಾಡುತ್ತಿದ್ದಾಗ ಪತ್ತೆಹಚ್ಚಲಾಗಿದೆ.
   ಆರೋಪಿಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದಾಗ ಗಾಂಜಾ ಸೇವನೆ ಮಾಡಿರುವುದಕ್ಕೆ ಖಚಿತವಾಗಿದೆ. ಹೀಗಾಗಿ, ಆರೋಪಿ ಕಾರ್ತಿಕ ಚಂದ್ರು ಸಿದ್ದಿ ವಿರುದ್ಧ ಎನ್‌ಡಿಪಿಎಸ್ ಕಾಯ್ದೆಯ ಕಲಂ 27(ಬಿ) ಅಡಿಯಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗಿದೆ. ಪ್ರಕರಣವನ್ನು ತನಿಖಾಧಿಕಾರಿ ಹೆಡ್ ಕಾನ್ಸ್ಟೇಬಲ್ ದೀಪಾ ಪೈ ಅವರು ದಾಖಲಿಸಿಕೊಂಡಿದ್ದಾರೆ.