Adv

news21 ‌ ‌YELLAPURNews prakatane --------- ‌ kumar Oct9to15 ‌ ‌ ‌ ‌ IMG-20241009-195526

Friday, 19 July 2024

ವಲಿಶಾಗಲ್ಲಿಯಲ್ಲಿ ದೂಮಿಕರಣ, ನೂತನನಗರದಲ್ಲಿ ಲಾರ್ವ ನಾಶ ಜಾಗೃತಿ

ಯಲ್ಲಾಪುರ : ಪಟ್ಟಣದ ವಲಿಶಾಗಲ್ಲಿಯಲ್ಲಿ ಸ್ವಚ್ಛತಾ ಕಾರ್ಯಕ್ರಮ ಹಾಗೂ ದೂಮಿಕರಣ (ಫಾಗಿಂಗ್) ಪಟ್ಟಣ ಪಂಚಾಯಿತಿ ವಾರ್ಡ್ ಸದಸ್ಯ ಹೆಸರು ಸೈಯದ್ ಅಲಿ ನೇತೃತ್ವದಲ್ಲಿ ನಡೆಯಿತು.
   ಕೆಜಿಎಸ್ ಪ್ರಾಥಮಿಕ ಶಾಲೆ ಅಂಗನವಾಡಿ ವ್ಯಾಯಾಮ ಶಾಲೆ ಮುಂತಾದ ಕಡೆ ಫಾಗಿಂಗ್ ಮಾಡಲಾಯಿತು. ಮತ್ತು ಅಲ್ಲಿಯ ಜನರಲ್ಲಿ ಮನೆಯ ಸಮೀಪ ನೀರು ಸಂಗ್ರಹವಾಗಿ ಅಲ್ಲಿ ಸೊಳ್ಳೆ ಉತ್ಪತ್ತಿ ತಾಣವಾಗದಂತೆ ನೋಡಿಕೊಳ್ಳಲು ಲಾರ್ವ ನಾಶಪಡಿಸಲು ಮಾಹಿತಿ ನೀಡಲಾಯಿತು. 
   ಈ ಭಾಗದಲ್ಲಿ ಸೊಳ್ಳೆಗಳ ಸಂಖ್ಯೆ ಹೆಚ್ಚಾಗಿದ್ದು ಶಾಲೆಯಲ್ಲಿಸೊಳ್ಳೆ ಬದುಕಿ ಹಚ್ಚಿ ಪಾಠ ಮಾಡುವ ಅನಿವಾರ್ಯತೆ ಬಂದುಬಿಟ್ಟಿದೆ ಎಂದು ಮಕ್ಕಳ ಪಾಲಕರು ತಿಳಿಸುತ್ತಾರೆ. ಯುಗಾದಿಚ್ಚಿನ ಗಮನವನ್ನು ಶಾಲೆ ಅಂಗನವಾಡಿ ಕಡೆಗಳಲ್ಲಿ ಕೇಂದ್ರೀಕರಿಸಿ ಕೆಲಸವನ್ನು ಮಾಡಲಾಯಿತು.
   ಕೆಜಿಎಸ್ ಶಾಲೆಯ ಶಿಕ್ಷಕಿ ಸರಸ್ವತಿ ಪಟ್ಟಣ ಪಂಚಾಯತಿ ಸಿಬ್ಬಂದಿಗಳು ಆರೋಗ್ಯ ಸಿಬ್ಬಂದಿಗಳು ಇದ್ದರು.

ನೂತನ ನಗರದಲ್ಲಿ ಲಾರ್ವ ನಾಶ ಜಾಗೃತಿ
ಯಲ್ಲಾಪುರ : ಪಟ್ಟಣದ ನೂತನ ನಗರದ ವಿವಿಧ ಕಡೆಗಳಲ್ಲಿ ಶುಕ್ರವಾರ ಡೆಂಗ್ಯೂ ಹರಡದಂತೆ ಸೊಳ್ಳೆಗಳನ್ನು ನಾಶಪಡಲು ಲಾರ್ವ ನಾಶ ಕಾರ್ಯಕ್ರಮಗಳನ್ನು ಆರೋಗ್ಯ ಇಲಾಖೆ ಪಟ್ಟಣ ಪಂಚಾಯಿತಿ ಹಾಗೂ ಸ್ಥಳೀಯರ ಮೂಲಕ ಹಮ್ಮಿಕೊಳ್ಳಲಾಗಿತ್ತು.
   ಪಟ್ಟಣ ಪಂಚಾಯಿತಿ ಸದಸ್ಯ ಅಬ್ದುಲ್ ಅಲಿ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಾರ್ವಜನಿಕರು ಭಾಗವಹಿಸಿ ತಮ್ಮ ಮನೆಯ ಸ್ವಚ್ಛತೆಯ ಬಗ್ಗೆ ಹಾಗೂ ಅಲ್ಲಿ ಸೊಳ್ಳೆ ಉತ್ಪತ್ತಿಯಾಗದಂತೆ ತಡೆಯಲು ಬಾಳ ದಿನದಿಂದ ಸಂಗ್ರಹದ ನೀರನ್ನು ಚೆಲ್ಲಿ ಆರೋಗ್ಯ ಇಲಾಖೆಯ ಕಾರ್ಯಕ್ರಮಕ್ಕೆ ಸಹಕಾರ ನೀಡಿದರು.