ಯಲ್ಲಾಪುರ: ಅರಬೈಲ್ ಘಟ್ಟದ ರಾಷ್ಟ್ರೀಯ ಹೆದ್ದಾರಿ 63ರಲ್ಲಿ ಕೆಟ್ಟು ನಿಂತ ವಾಹನಗಳಿಂದಾಗಿ ವಾಹನ ಸಂಚಾರ ಅಡಚಣೆಯಾಗಿತ್ತು. ಈ ಕುರಿತು ಯಲ್ಲಾಪುರ ನ್ಯೂಸ್ ವರದಿ ಪ್ರಕಟಿಸಿದ ನಂತರ, ಯಲ್ಲಾಪುರ ಪೊಲೀಸ್ ಇಲಾಖೆ ತಕ್ಷಣವೇ ಕ್ರಮ ಕೈಗೊಂಡು ಬಹುತೇಕ ತಿರುವುಗಳಲ್ಲಿ ಪೀನ (ಕಾನ್ವೆಕ್ಸ್) ದರ್ಪಣಗಳನ್ನು ಅಳವಡಿಸಿದೆ. ಇದು ವಾಹನ ಚಾಲಕರಿಗೆ ಅನುಕೂಲ ಮಾಡಿಕೊಟ್ಟಿದೆ.
ಪೊಲೀಸ್ ನಿರೀಕ್ಷಕರಾದ ರಮೇಶ್ ಹಾನಾಪುರ್ ಮಾರ್ಗದರ್ಶನದಲ್ಲಿ ಟ್ರಾಫಿಕ್ ಪೊಲೀಸ್ ಉಪ ನಿರೀಕ್ಷಕರಾದ ನಸ್ರೀನ್ ತಾಜ್ ಚಟ್ಟರಗಿ ಅವರ ತಂಡ, ಗಾರೆ ಕೆಲಸದವರ ಸಹಾಯದಿಂದ ಶಾಶ್ವತವಾಗಿ ಪೀನ ದರ್ಪಣಗಳು ಮತ್ತು ಸೂಚನಾ ಫಲಕಗಳನ್ನು ಅಳವಡಿಸಿದರು.
ರಸ್ತೆಯ ಮಧ್ಯ ರಸ್ತೆಯಲ್ಲಿ ಕೆಟ್ಟು ನಿಂತ ವಾಹನಗಳನ್ನು ಪಕ್ಕಕ್ಕೆ ಸರಿಸಲು ಎಲ್ಲಾ ಕ್ರಮಗಳನ್ನು ಅವರು ಕೈಗೊಂಡಿದ್ದಾರೆ.