Adv

news21 ‌ ‌YELLAPURNews prakatane --------- ‌ kumar Oct9to15 ‌ ‌ ‌ ‌ IMG-20241009-195526

Thursday, 4 July 2024

>> ಗುರುವಾರವೂ ಮಳೆಯ ಅರ್ಭಟ, ಅರಬೈಲ್ ಘಟ್ಟದ ರಸ್ತೆ ಮೇಲೆ ಬಿದ್ದ ಮರ ತೆರವು >> ಕೂ ಆ್ಯಪ್ ಇನ್ನು ಮುಂದೆ ಕಾರ್ಯ ನಿರ್ವಹಿಸುವುದಿಲ್ಲ

 


ಯಲ್ಲಾಪುರ ; ತಾಲೂಕಿನಲ್ಲಿ ಬುಧವಾರ ಭಾರಿ ಮಳೆ ಸುರಿದಿದ್ದು, ಜನಜೀವನ ಅಷ್ಟವ್ಯಸ್ತವಾಗಿದ್ದು ಅನೇಕ ರಸ್ತೆಗಳ ಸಂಚಾರಕ್ಕೆ ವ್ಯತ್ಯಯವಾಗಿತ್ತು.

   ಹಾಗೆಯೇ ಗುರುವಾರ ಕೂಡ ಬೆಳಿಗ್ಗೆಯಿಂದಲೇ ಮಳೆ ಸುರಿಯುತ್ತಿದ್ದು, ರಾಷ್ಟ್ರೀಯ ಹೆದ್ದಾರಿ 63ರ ಅಂಕೋಲಾ ಯಲ್ಲಾಪುರ ಅರಬೈಲ್ ಘಟ್ಟದಲ್ಲಿ ರಸ್ತೆಯ ಮಧ್ಯೆ ಮರಗೊಂಡು ಉರುಳಿ ಬಿದ್ದಿದ್ದು ಸಂಚಾರಕ್ಕೆ ವ್ಯತ್ಯಯವಾಗಿದೆ. ರಾಷ್ಟ್ರೀಯ ಹೆದ್ದಾರಿಯ ನಿರ್ವಹಣೆ ವಹಿಸಿಕೊಂಡವರು ಹಾಗೂ ಸ್ಥಳೀಯರು ಸೇರಿ ಬಿದ್ದ ಮರವನ್ನು ಕತ್ತರಿಸಿ ತೆಗೆದು ಕೂಡಲೇ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ.

    ತಾಲೂಕಿನಲ್ಲಿ ಇದುವರೆಗೂ 704.20 ಮಿ.ಮೀ ಮಳೆಯಾಗಿದ್ದು ಬುಧವಾರ ಒಂದೇ ದಿನಕ್ಕೆ 822 ಮಿ.ಮೀ ಮಳೆಯಾಗಿದೆ. ಈ ವರೆಗೆ ವಾಡಿಕೆ ಪ್ರಕಾರ 663.0 ಮಿ.ಮೀ ಆಗಬೇಕಿತ್ತು, 704.20 ಮಿ.ಮೀ ಆಗಿದೆ.
     ಭಾರಿ ಮಳೆ ಸುರಿಯುತ್ತಿದ್ದರೂ ಕೂಡ ಅಷ್ಟೇ ಪ್ರಮಾಣದಲ್ಲಿ ಗಾಳಿ ಬೀಸುತ್ತಿಲ್ಲ ಹೀಗಾಗಿ ತಾಲೂಕಿನಲ್ಲಿ ಸಂಭವಿಸಬಹುದು ಎನ್ನಲಾದ ಅವಗಡಗಳು ತಪ್ಪಿದಂತಾಗಿದೆ.

ಕೂ ಆ್ಯಪ್ ಇನ್ನು ಮುಂದೆ ಕಾರ್ಯ ನಿರ್ವಹಿಸುವುದಿಲ್ಲ


ಯಲ್ಲಾಪುರ : ಕೂ ಭಾರತೀಯ ಮೈಕ್ರೋಬ್ಲಾಗಿಂಗ್ ಪ್ಲಾಟ್‌ಫಾರ್ಮ್ ಮತ್ತು ಎಕ್ಸ್ ಗೆ ಪರ್ಯಾಯವಾಗಿ (ಹಿಂದೆ ಟ್ವಿಟ್ಟರ್), ಡೆಲಿ ಹಂಟ್ ಜೊತೆಗಿನ ಸ್ವಾಧೀನ ಮಾತುಕತೆ ವಿಫಲವಾದ ನಂತರ ಕೂ ಆ್ಯಪ್ ಸ್ಥಗಿತ ಗೊಳ್ಳುತ್ತಿದೆ.  2020 ರಲ್ಲಿ ಪ್ರಾರಂಭವಾದ, ಕೂ ಜನಪ್ರಿಯತೆಯನ್ನು ಗಳಿಸಿದೆ, 60 ಮಿಲಿಯನ್ ಡೌನ್‌ಲೋಡ್‌ಗಳು ಮತ್ತು ಗರಿಷ್ಠ ಮೌಲ್ಯ 285.5 ಮಿಲಿಯನ್ ಡಾಲರ್. ಆದಾಗ್ಯೂ, ಕಂಪನಿಯು ಹೆಚ್ಚುವರಿ ಹಣವನ್ನು ಸಂಗ್ರಹಿಸಲು ಬಹಳಷ್ಟು ಕಷ್ಟ ಪಡಬೇಕಾಯಿತು. ಕೂ ಉದ್ಯೋಗಿಗಳನ್ನು ಗಣನೀಯವಾಗಿ ಕಡಿತಗೊಳಿಸಬೇಕಾಯಿತು.  ಪ್ಲಾಟ್‌ಫಾರ್ಮ್ ಅನ್ನು ಮೇಲೆ ತರಲು ಮಾಡಿದ ಸಂಸ್ಥಾಪಕರ ಪ್ರಯತ್ನಗಳ ಹೊರತಾಗಿಯೂ, ಕೂ ಅಂತಿಮವಾಗಿ ಕಾರ್ಯಾಚರಣೆಯನ್ನು ಕೊನೆಗೊಳಿಸಲು ನಿರ್ಧರಿಸಿದೆ ಎಂದು ಹೇಳಲಾಗುತ್ತಿದೆ.
    ಬೇಸರದ ಸಂಗತಿ ಎಂದರೆ ಯಲ್ಲಾಪುರ ನ್ಯೂಸ್ ಗೆ ಕೂ ಆ್ಯಪ್ ನಲ್ಲಿ 3 ಸಾವಿರಕ್ಕೂ ಹೆಚ್ಚು ಜನ ಸಬಸ್ಕ್ರೈಬರ್ ಇದ್ದಿದ್ದರು.